[1]ಕುಂದಾಪುರ : ಕುಂದಾಪುರ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಹಾಗೂ ಜೀಪ್ ಚಾಲಕ ರಾಮ ಗುರುವಾರ ರಾತ್ರಿ ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಶಾಸ್ತ್ರಿ ಪಾರ್ಕ್ ಹತ್ತಿರ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕುಂದಾಪುರ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಹಾಗೂ ಚಾಲಕ ರಾಮ ಗಂಬೀರವಾಗಿ ಗಾಯಗೊಂಡಿದ್ದಾರೆ.
ಪಿ.ಎಸ್.ಐ. ರೇವತಿ ಹಾಗೂ ಚಾಲಕ ರಾಮ ಕುಂಭಾಶಿ ಕಡೇಯೀಂದ ಕುಂದಾಪುರದ ಕಡೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆಯಲ್ಲಿ ಜೀಪಿಗೆ ಸಂಗಮ್ ಕಡೆಯಿಂದ ವಾಹನವೊಂದು ರಸ್ತೆಯ ಬಲಬದಿಗೆ ಬಂದ ಕಾರಣ ಅಪಘಾತವಾಗುವುದನ್ನು ತಪ್ಪಿಸಲು, ರಸ್ತೆಯ ಎಡಬದಿಗೆ ಜೀಪನ್ನು ಚಲಾಯಿಸಿಲಾಯಿತು ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಎಡಬದಿಯಲ್ಲಿ ಪಾರ್ಕಿಂಗ್ ಲೈಟ್ ಹಾಕದೇ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆಯಿತು.
ರೇವತಿಯವರನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.