- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಡುಪಿ : ಕಿಡಿಗೇಡಿಗಳಿಂದ ನೇಜಾರ್ ನಲ್ಲಿ ಮಸೀದಿ ಮೇಲೆ ಕಲ್ಲೆಸೆತ

Nejar mosque [1]ಉಡುಪಿ : ನೇಜಾರ್ ಗ್ರಾಮದಲ್ಲಿ ಕೆಲವು ದಿನಗಳಿಂದ ಕೋಮು ದ್ವೇಷ ಕೆರಳಿಸುವ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಿದ್ದು, ನಿನ್ನೆ ಈ ಹಿನ್ನಲೆಯಲ್ಲಿ ಕೆಲವು ಕಿಡಿಗೇಡಿಗಳು ನೇಜಾರ್ ನಲ್ಲಿರುವ ಮಸೀದಿಗೆ ಕಲ್ಲೆಸೆದಿದ್ದಾರೆ.

ಮಂಗಳವಾರ ರಾತ್ರಿ ನೆಜಾರ್ ನಲ್ಲಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗುಪೊಂದು ಅನ್ಯಕೋಮಿನ ವ್ಯಕ್ತಿಯ   ಮೇಲೆ ಹಲ್ಲೆ ನಡೆಸಿ ಬಳಿಕ ಅದೇ ಗುಂಪು ಇಲ್ಲಿರುವ ಮಸೀದಿಯ ಮೇಲೂ ಕಲ್ಲೆಸೆದಿದ್ದಾರೆ.  ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.