- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮುಂಡ್ಕೂರಿನ ಬೆಳ್ಮಣ್ ಬಳಿ ಟಿಪ್ಪರ್ ಪಲ್ಟಿ, ಓರ್ವನ ಸಾವು

Truck overturns at Karkala [1]ಕಾರ್ಕಳ : ಸೋಮವಾರ ಸಂಜೆ 4.30ರ ಸುಮಾರಿಗೆ ಕಾರ್ಕಳದಿಂದ ಮುಂಡ್ಕೂರಿಗೆ ಇಂಟರ್‌ಲಾಕ್‌ ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ವೊಂದು ಬೆಳ್ಮಣ್ ಇಂದಾರು ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಓರ್ವ ಸ್ಥಳದಲ್ಲೆ ಮೃತಪಟ್ಟರೆ ಚಾಲಕನ ಸಹಿತ ೪ ಮಂದಿ ಗಾಯಗೊಂಡಿದ್ದು, ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.

ಮೃತಪಟ್ಟವರು ಯಾದಗಿರಿ ಮೂಲದವರಾಗಿದ್ದು, ಇತರರ ವಿವರ ತಿಳಿದು ಬಂದಿಲ್ಲ. ಅಪಘಾತ ನಡೆದ ಸ್ಥಳದಲ್ಲಿ ರಬ್ಬರ್‌ ಮೌಲ್ಡಿಂಗ್‌ ಚೆಲ್ಲಾ ಪಿಲ್ಲಿಯಾಗಿದ್ದು ಗಾಯಗೊಂಡವರ ಪೈಕಿ ಓರ್ವನ ಕಾಲು, ತಲೆಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.