- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ದಿಗ್ಗಜ ಕಲಾಮಣಿಗಳ ಕೂಟದಲ್ಲಿ ಮೊದಲ ಪ್ರಯೋಗ ರಂಗಾರ್ಪಣೆ

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ' [1]ಮಂಗಳೂರು : ಒಡಿಯೂರು ಶ್ರೀಗಳ 50ನೇ ಜನ್ಮ ದಿನೋತ್ಸವವನ್ನು ಆಚರಿಸುವ ಸುಸಂದರ್ಭದಲ್ಲಿ ಒಡಿಯೂರು ಕ್ಷೇತ್ರದ ಹಿನ್ನಲೆ ಇರುವ ಪೌರಾಣಿಕ ಹಾಗೂ ಐತಿಹಾಸಿಗಳ ಕಥೆಯನ್ನಾಧರಿಸಿ ತಾರಾನಾಥ ವರ್ಕಾಡಿ ರಚಿಸಿದ `ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನವನ್ನು  ಇಂದು ನಗರದ ಪುರಭವನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ರಂಗಾರ್ಪಣೆಗೈದರು.

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ' [2]ಧರ್ಮ ಮತ್ತು ಸಂಸ್ಕೃತಿಯ ಅನಾವರಣ ಆಗಬೇಕಾದರೆ ಕಲೆಯಿಂದ ಮಾತ್ರ ಸಾಧ್ಯ, ಒಡಿಯೂರು ಕ್ಷೇತ್ರ ಮಹಾತ್ಮೆಯನ್ನು ಯಕ್ಷಗಾನದ ಮೂಲಕ ಭಕ್ತರಿಗೆ ತಿಳಿಸುವ ಈ ಕಾರ್ಯ ಪ್ರಶಂಶನೀಯ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿಯವರು ತಮ್ಮ ಅಶಿರ್ವಚನ ಭಾಷಣದಲ್ಲಿ ಹೇಳಿದರು.

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ' [3]ಯಕ್ಷಗಾನದ ಅನುಭವಗಳು, ಅದರಲ್ಲಿ ಬರುವ ಪಾತ್ರಗಳ ಮಹತ್ವವನ್ನು ಯಕ್ಷಗಾನ ಕಲಾವಿದ ಕುಂಬ್ಲೆ ಸುಂದರ ರಾವ್ ತಿಳಿಸಿದರು. ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಡಾ. ನಾರಾಯಣ ಶೆಟ್ಟಿ ಸೀಮಂತೂರು ಉಪಸ್ಥಿತರಿದ್ದರು.

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ' [4]ಒಡಿಯೂರು ಗುರುದೇವಾ ಸೇವಾಬಳಗ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್ ಸ್ವಾಗತಿಸಿದರು.
ಮಧ್ಯಾಹ್ನ 3 ರಿಂದ ರಾತ್ರಿ 9 ರ ವರೆಗೆ ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ `ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ' [5]

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ' [6]

`ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ' [7]