[1]ಮಂಗಳೂರು : ಮೇ 6 ಸೋಮವಾರ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಕೊಣಾಜೆ ವಿಶ್ವಮಂಗಳ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಮಾನ್ವಿತಾ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನಿಯಾಗಿದ್ದು, ಇಡಿ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ.
ಒಟ್ಟು 625 ಅಂಕಗಳಲ್ಲಿ 621 ಅಂಕ ಪಡೆದ ಮಾನ್ವಿತ ಇಂಗ್ಲೀಷ್, ಗಣಿತ ಮತ್ತು ಸಮಾಜ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ 99 ಅಂಕಗಳನ್ನು ಪಡೆದರೆ, ವಿಜ್ನಾನ ನದಲ್ಲಿ 98 ಅಂಕ ಪಡೆದಿದ್ದಾಳೆ. ಓದಿನಲ್ಲಿ ಮುಂದಿರುವ ಮಾನ್ವಿತಾ ಚಿತ್ರಕಲೆ ಮತ್ತು ರೇಖಾ ಚಿತ್ರ ಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ಚಿತ್ರಕಲೆಯಲ್ಲಿ 200 ಕ್ಕೂ ಹೆಚ್ಚು ಬಹುಮಾನಗಳನ್ನು ಪಡೆದಿದ್ದಾಳೆ. ಈಕೆ ಕಂಬಳಪದವು ನಿವಾಸಿ ಮೋಹನ್ ದಾಸ್ ಮತ್ತು ಶೋಭಾ ದಂಪತಿ ಪುತ್ರಿ.