- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಪು : ರಸ್ತೆ ಅಪಘಾತ ದಂಪತಿ ಸಾವು

bike bus accident Kaup [1]ಕಾಪು : ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ನ ಚಾಲಕ ಟ್ಯಾಂಕರೊಂದನ್ನು ಹಿಂದಿಕ್ಕುವ ಭರದಲ್ಲಿ ಕೈನೆಟಿಕ್‌ ಹೋಂಡಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಹಳೇ ಮಾರಿಗುಡಿ ದೇವಸ್ಥಾನದ ಮುಂಭಾಗದ ದ್ವಾರದ ಬಳಿ ನಡೆದಿದೆ.

ಮೃತರು ಕಾಪು ಪಡು ಗ್ರಾಮದ ತೆಂಕುಕರೆ ಹೊಸಮನೆಯ ಬಾಲಕೃಷ್ಣ ಶೆಟ್ಟಿ(50), ಮತ್ತು ಅವರ ಪತ್ನಿ ಮಮತಾ ಶೆಟ್ಟಿ (40).  ಮೃತ ಬಾಲಕೃಷ್ಣ   ಕುರ್ಕಾಲು -ಸುಭಾಶ್ ನಗರದಲ್ಲಿ ಜೀನಸು ವ್ಯಾಪಾರ ನಡೆಸುತ್ತಿದ್ದು, ಮಂಗಳವಾರ ದಂಪತಿ ಕುರ್ಕಾಲುವಿನಿಂದ ಕಾಪು ಮಾರಿಗುಡಿಗೆ ಪೂಜೆಗೆಂದು ತೆರಳುತ್ತಿದ್ದ ವೇಳೆ ಈ ಘಟನೆ ಸಂಭವವಿಸಿದೆ. ಅಪಘಾತದ ತೀವ್ರತೆಯಿಂದ ಬಾಲಕೃಷ್ಣ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟರೆ, ಅವರ ಪತ್ನಿ ಮಮತಾ ಶೆಟ್ಟಿ ಆಸ್ಪತ್ರೆಗೆ ಕೊಂಡೊಯ್ಯುವ ಹಾದಿಯಲ್ಲಿ ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣವಾದ ವೋಲ್ವೋ ಬಸ್ಸು ಹೆದ್ದಾರಿಗೆ ಅಡ್ಡವಾಗಿ ನಿಂತ ಪರಿಣಾಮ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಮೃತ ಬಾಲಕೃಷ್ಣ ಶೆಟ್ಟಿ ಮತ್ತು ಮಮತಾ ಶೆಟ್ಟಿ ದಂಪತಿಗೆ ಮೂವರು ಗಂಡು ಮಕ್ಕಳಿದ್ದು, ಹೆತ್ತವರನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಇಲ್ಲದೆ ಗಾಯಾಳುಗಳನ್ನು ಸರಿಯಾದ ಸಂದರ್ಭದಲ್ಲಿ ಆಸ್ಪತ್ರೆಗೆ ಸಾಗಿಸಲು ಪರದಾಡುವಂತಾಯಿತು. ಆದರೆ ಗಾಯಗೊಂಡ ದಂಪತಿಗಳನ್ನು ರಿಕ್ಷಾ ಹಾಗು ಆಮ್ನಿ ಚಾಲಕರು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರಾದರು ಆಸ್ಪತ್ರೆ ತಲುಪುವ ವೇಳೆ ದಂಪತಿಗಳು ಮೃತಪಟ್ಟಿದ್ದರು.