- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗೂಳಿಹಟ್ಟಿ ಚಿತ್ರದಲ್ಲಿ ಗೂಳಿಹಟ್ಟಿ ಶೇಖರ್

Goolihatti [1]ಅರ್ಜುನ್ ಪ್ರೊಡಕ್ಷನ್ನಲ್ಲಿ ತಯಾರಾಗುತ್ತಿರುವ ಚಿತ್ರದ ಪಾತ್ರವೊಂದರಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ನಟಿಸಲು ಒಪ್ಪಿಕೊಂಡಿದ್ದಾರಂತೆ.  ಕಂಠೀರವ ಸ್ಟುಡಿಯೋದಲ್ಲಿ  ಗೂಳಿಹಟ್ಟಿ ಚಿತ್ರಕ್ಕೆ ಅದ್ದೂರಿ ಚಾಲನೆ ನೀಡಿ ಚಿತ್ರ ಸೆಟ್ಟೇರಿದೆ.

ಐವರು ಯುವಕರು ಅವಿತು ಕುಳಿತು ಯಾವುದೋ ಒಂದು ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಪ್ಲಾನ್ ಮಾಡುತ್ತಾರೆ. ಅಂದರೆ ಅವರ ಇಮೇಜ್ ಸರಿಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಈ ಐವರ ತಂಡ ಹಣಕ್ಕಾಗಿ ಯಾವ ಕೆಲಸವನ್ನು ಮಾಡಲೂ ಹೇಸುವುದಿಲ್ಲ. ಅವರು ನಾಯಕಿಗೆ ಭಯಭೀತರಾಗಬೇಕಾದ ಸಂದರ್ಭವೊಂದು ಬರುತ್ತದೆ. ಇದರ ಸುತ್ತ ಕಥೆ ನಡೆಯುತ್ತದೆ. ದುನಿಯಾ ಖ್ಯಾತಿಯ ರಶ್ಮಿಯನ್ನು ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕರು ಹೇಳುತ್ತಾರೆ.

ಅಪ್ಪು ವೆಂಕಟೇಶ್ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವನ್ ಚಿತ್ರದ ನಾಯಕ. ನಿರ್ದೆಶಕ ಶಶಾಂಕ್ ರಾಜ್ ಅವರ ಭಾವ ಅರ್ಜುನ್ ಚಿತ್ರದ ನಿರ್ಮಾಪಕರು. ಶ್ರೀಮಂಜು ಸಂಗೀತ ನಿರ್ದೆಶಿಸಿರುವ ಚಿತ್ರಕ್ಕೆ ಮುರಳಿ ದನಿ ನೀಡಿದ್ದಾರೆ.