ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಿರ್ಸಿ ಮೂಲದ ಯುವಕ ನಾಪತ್ತೆ

11:41 AM, Sunday, July 21st, 2013
Share
1 Star2 Stars3 Stars4 Stars5 Stars
(5 rating, 6 votes)
Loading...

Vinay Vazಮಂಗಳೂರು:  ಶುಕ್ರವಾರ ರಾತ್ರಿ ಕೇರಳದ ಎರ್ನಾಕುಳಂನಿಂದ ಮಂಗಳೂರು ಕಡೆಗೆ ಬರುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಸಿರ್ಸಿ ಮೂಲದ ವಿನಯ್‌ ವಾಜ್‌ (24) ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದಾರೆ.

ನೇತ್ರಾವತಿ ಸೇತುವೆ ಬಳಿ ತಲುಪಿದಾಗ ರೈಲು ನಿಧಾನವಾಗಿ ಚಲಿಸಲಾರಂಭಿಸಿದ್ದು, ಇದು ನಿಲ್ದಾಣವಾಗಿರಬೇಕು ಎಂದು ಭಾವಿಸಿ ಕತ್ತಲೆಯಲ್ಲಿ ವಿನಯ್‌ರಾಜ್‌ ಇಳಿದು ನೇತ್ರಾವತಿ ನದಿಗೆ ಬಿದ್ದಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ.

ವಿನಯರಾಜ್‌ ಸಹಿತ 47 ಮಂದಿಯ ತಂಡ  ಕೇರಳದಿಂದ ಕುಮಟಾಕ್ಕೆ ಪ್ರಯಾಣಿಸುತ್ತಿತ್ತು.  173 ಸೆ.ಮೀ. ಎತ್ತರವಿದ್ದು, ಕನ್ನಡ, ಇಂಗ್ಲಿಷ್‌, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾರೆ. ಕಪ್ಪು ಅಂಗಿ ಮತ್ತು ನೀಲಿ ಜೀನ್ಸ್‌ ಪ್ಯಾಂಟ್‌ ಧರಿಸಿರುತ್ತಾರೆ.

ಇವರನ್ನು ಯಾರಾದರೂ ಜೀವಂತವಾಗಿ ಅಥವಾ ಶವವಾಗಿ ಪತ್ತೆ ಮಾಡಿದಲ್ಲಿ ಫಾ| ವಿಲ್ಸನ್‌ ಫೆರ್ನಾಂಡಿಸ್‌, ಧರ್ಮಗುರು, ಇನ್‌ಫೆಂಟ್‌ ಜೀಸಸ್‌ ಚರ್ಚ್‌, ಸಿರ್ಸಿ ಅವರಿಗೆ (9448408661) ಅವರಿಗೆ ಅಥವಾ ಮಂಗಳೂರಿನ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲು ಕೋರಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English