[1]ಮಂಗಳೂರು : ಮಂಗಳೂರಿನ ಮಂಗಳ ಕ್ರಿಡಾಂಗಣದಿಂದ ಜ್ಯೊತಿ ಟಾಕೀಸ್ ತನಕ ಚಲ್ಲಾಪಿಲ್ಲಿ ಚಿತ್ರದ 25ನೇ ದಿನದ ರೋಡ್ ಶೋ ಜುಲೈ 29 ಸೋಮವಾರ ನಡೆಯಿತು. ಈ ರೋಡ್ ಶೋನಲ್ಲಿ ನಾಯಕ ನಟ ವಿಜಯ ರಾಘವೇಂದ್ರ ಮತ್ತು ನಟಿ ಐಶ್ವರ್ಯನಾಗ್ ಸಹಿತ ಚಿತ್ರ ತಂಡದ ನಟರು ಭಾಗವಹಿಸಿದರು.
ರೋಡ್ ಶೋನಲ್ಲಿ ಅಭಿಮಾನಿಗಳ ಮಹಾಪುರವೇ ನೆರೆದಿತ್ತು, ಉತ್ಸಾಹಿ ಅಭಿಮಾನಿಗಳು ಬೈಕ್ ಮೂಲಕ ರ್ರ್ಯಾಲಿ ನಡೆಸಿದರು. ನಂತರ ನಟ ವಿಜಯ ರಾಘವೇಂದ್ರ ಮತ್ತು ನಟಿ ಐಶ್ವರ್ಯನಾಗ್ ಜ್ಯೊತಿ ಟಾಕೀಸ್ ನಲ್ಲಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದರು.
ರೋಡ್ ಶೋನಲ್ಲಿ ಬೋಜರಾಜ್ ವಾಮಂಜೂರು, ನಿರ್ಮಾಪಕ ಸುದೇಶ್ ಭಂಡಾರಿ, ನಿರ್ದೇಶಕ ಸಾಯಿಕೃಷ್ಣ, ತಿಮ್ಮಪ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
[2]
ಸಿನಿಪೋಲಿಸಿನಲ್ಲಿ ಚಲ್ಲಾಪಿಲ್ಲಿ ಚಿತ್ರದ 25ನೇ ದಿನದ ಸುದ್ದಿಘೊಷ್ಟಿ
ಮಂಗಳೂರು : ನಗರದ ಸಿನಿಪೋಲಿಸಿನಲ್ಲಿ ಚಲ್ಲಾಪಿಲ್ಲಿ ಚಿತ್ರದ 25ನೇ ದಿನದ ಕುರಿತಾದ ಸುದ್ದಿಘೊಷ್ಟಿ ಜುಲೈ29 ರಂದು ನಡೆಯಿತು. ಸುದ್ದಿಘೊಷ್ಟಿಯಲ್ಲಿ ನಟ ವಿಜಯ ರಾಘವೇಂದ್ರ ಮಾತಾಡಿ, ಚಲ್ಲಾಪಿಲ್ಲಿ ಚಿತ್ರ ಯಶಸ್ವಿ ಕಂಡಿದ್ದು ತುಂಬ ಸಂತಸವಾಗಿದೆ ನಾನು ಈ ಹಿಂದೆ ಹಲವಾರು ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದರೂ, ಬಿಗ್ಗ್ ಬಾಸ್ ಕಾರ್ಯಕ್ರಮದ ನಂತರ ಬಿಡುಗಡೆಯಾದ ಯಶಸ್ವಿ ಕಂಡ ಮೊದಲ ಚಿತ್ರ ಚೆಲ್ಲಾಪಿಲ್ಲಿಯಾಗಿದೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದರು.
[3]
ನಂತರ ಸಾಯಿಕೃಷ್ಣ ಮಾತಾಡಿ ಈ ಚಿತ್ರವು ಯಶಸ್ವಿಯಾಗಿ 25ದಿನಗಳನ್ನು ಪೂರೈಸಿದ್ದು, ನಮ್ಮ ನೀರಿಕ್ಷೆಯಂತೆಯೇ ಆಗಿದೆ ಎಂದರು.
ಸುದ್ದಿಘೊಷ್ಟಿಯಲ್ಲಿ ನಟಿ ಐಶ್ವರ್ಯನಾಗ್, ಬೋಜರಾಜ್ ವಾಮಂಜೂರು, ನಿರ್ಮಾಪಕ ಸುದೇಶ್ ಭಂಡಾರಿ ಉಪಸ್ಥಿತರಿದ್ದರು.