ಮಂಗಳೂರು : ಇಂಧನ ಮತ್ತು ಬಿಡಿಭಾಗಗಳ ಬೆಲೆ ಎರಿಕೆಯಿಂದ ನಗರದ ಸಿಟಿ,ಸರ್ವಿಸ್,ಎಕ್ಸ್ ಪ್ರೆಸ್ ಬಸ್ಸುಗಳ ಪ್ರಯಾಣ ದರವನ್ನು ಆಗಸ್ಟ್ 20ರಿಂದ 10 ರಿಂದ 15% ಏರಿಸಲಾಗುದೆಂದು ಬಸ್ಸು ಮಾಲಕರ ಸಂಘದ ಜನರಲ್ ಸೆಕ್ರೆಟರಿಯಾದ ಎಸ್. ಸದಾನಂದ ಛಾತ್ರರವರು ಓಸಿಯನ್ ಪರ್ಲ್ ನಲ್ಲಿ ನಡೆದ ಪತ್ರಿಕಾಘೊಷ್ಟಿಯಲ್ಲಿ ತಿಳಿಸಿದರು.
ನಂತರ ಮಾತಾಡಿ ಇಂದನದ ದರ ಏರಿಕೆಯಾದಲ್ಲಿ ಬಸ್ಸಿನ ದರ ಏರಿಸುವುದು ಅನಿವಾರ್ಯವಾಗುತ್ತಿದೆ. ನಾವು ಬಸ್ಸುಗಳ ಪ್ರಯಾಣ ದರವನ್ನು ಕನಾರ್ಟಕ ಸರಕಾರದ ಆದೇಶದ ಪ್ರಕಾರ ಕನಿಷ್ಠ ಪ್ರಮಾಣದಲ್ಲಿ ಏರಿಸುತ್ತೇವೆ ಎಂದು ಆಶ್ವಾಸನೆ ನೀಡುತ್ತೇವೆ.ನಗರದ ಬಸ್ಸುಗಳ ದರವನ್ನು ಕನಿಷ್ಶ ದರ ಆರು ರೂಪಯಿಯಿಂದ ಏಳು ರೂಪಾಯಿಗೆ,ಮಂಗಳೂರಿನಿಂದ ಉಡುಪಿಗೆ 50ರೂಪಯಿಯಿಂದ 55 ರೂಪಾಯಿಗೆ ಏರಿಕೆಯಾಗಲಿದೆ ಎಂದರು.