ಮಂಗಳೂರು : ಡಾ. ನರೇಂದ್ರ ದಾಬೊಲ್ಕರ್ ಹಂತಕರನ್ನು ಶೀಘ್ರವಾಗಿ ಬಂಧಿಸಬೇಕೆಂದು ಮಂಗಳೂರಿನ ವಿಚಾರವಾದಿ ಸಂಘಟನೆಯ ವತಿಯಿಂದ ನಗರದ ಡಿ.ಸಿ. ಆಪೀಸ್ ಬಳಿ ಆಗಸ್ಟ್ 26ರಂದು ಪ್ರತಿಭಟನೆ ನಡೆಯಿತು.
ವಿಚಾರವಾದಿ ಡಾ. ನರೇಂದ್ರ ದಾಬೊಲ್ಕರ್ ಅವರ ತೀವ್ರ ವಿಚಾರಗಳನ್ನು ಸಹಿಸದ ಕೆಲವು ವ್ಯಕ್ತಿಗಳು ಅವರನ್ನು ಮುಗಿಸಿದ್ದಾರೆ, ಆದರೆ ಅವರ ವಿಚಾರಗಳನ್ನು ಎಂದಿಗೂ ಹತ್ಯೆ ಮಾಡಲು ಸಾಧ್ಯವಿಲ್ಲ. ಜನರ ಮೂಡನಂಬಿಕೆಗಳು ತೊಲಗಬೇಕು, ವೈಜ್ಞಾನಿಕ ಮನೋಭಾವ ಬೆಳೆಯಬೇಕೆಂದು ವಿಚಾರವಾದಿ ಸಂಘಟನೆಯ ಮುಖಂಡರಾದ ನರೇಂದ್ರ ನಾಯಕ್ ತಿಳಿಸಿದರು.
ನಮ್ಮ ಕೊನೆಯ ಶ್ವಾಸ ಇರುವವರೆಗೆ ಮೂಢ ನಂಬಿಕೆಯ ವಿರುದ್ಧ ಹೋರಾಡುತ್ತೇವೆ. ಸಮಾಜಸೇವಕರು ರಾಜಕೀಯಕ್ಕೆ ಬರುವ ಅವಶ್ಯವಿದೆ, ರಾಜಕೀಯಕ್ಕೆ ಬಂದು ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಪಿ.ವಿ.ಡೆಸಾ, ಪಂಜಿಮೊಗರು ಕಾಪೋರೇಟರ್ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು