- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭಾರತಿ ಅರಸ್ ಬಂಧನಕ್ಕೆ ರಾಜ್ಯ ಹೈಕೋರ್ಟ್ ವಾರಂಟ್

[1]ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸ್ ಪುತ್ರಿ ಭಾರತಿ ಅರಸ್ ಬಂಧನಕ್ಕೆ ರಾಜ್ಯ ಹೈಕೋರ್ಟ್ ಶುಕ್ರವಾರ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಚಿತ್ರಲೇಖಾ ಕೊಲೆ ಪ್ರಕರಣದ ಆರೋಪಿಗಳಾದ ಭಾರತಿ ಅರಸ್, ಚಂದ್ರಕಾಂತ್ ಹಾಗೂ ಮಧುಕರ್ ಇಂದು ವಿಚಾರಣೆ ಸಂದರ್ಭದಲ್ಲಿ ಹಾಜರಾಗದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಸೆ.9ರ ಒಳಗಾಗಿ ಆರೋಪಿಗಳನ್ನು ನ್ಯಾಯಪೀಠದ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ  ಆದೇಶ ನೀಡಿದೆ.
ಮೇ 27ರಂದು ಮೂವರನ್ನು ಒಂದನೇ ತ್ವರಿತ ನ್ಯಾಯಾಲಯ ದೋಷಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ಚಿತ್ರಲೇಖಾ ತಾಯಿ ಶಾರದಾ ಅರಸ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಈ ವಾರಂಟ್ ಹೊರಡಿಸಿದೆ. 2004ರ ಜನವರಿ 24ರಂದು ಚಿತ್ರಲೇಖಾ ಕೊಲೆಯಾಗಿತ್ತು.