ಮಂಗಳೂರು: ಟಿಪ್ಪರ್ ಹಾಗೂ ಟ್ರಕ್ ಮುಖಾಮುಖೀ ಡಿಕ್ಕಿಯಾಗಿ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ನಂತೂರು ಸರ್ಕಲ್ ಬಳಿ ಮೇ6ರ ಬೆಳಗ್ಗೆ ಸಂಭವಿಸಿದೆ.
ಮರಳು ಸಾಗಿಸುತ್ತಿದ್ದ ಟಿಪ್ಪರ್ ಮಂಗಳೂರು ಕಡೆಗೆ ಬರುತ್ತಿದ್ದರೆ ಕೊಕೊಕೋಲಾ ಪಾನಿಯಗಳ ಬಾಕ್ಸ್ ತುಂಬಿಸಿದ್ದ ಟ್ರಕ್ ಕೇರಳದತ್ತ ಚಲಿಸುತ್ತಿತ್ತು .
ಟ್ರಕ್ ಚಾಲಕ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ಮುಖಾಮುಖೀಯಾಗಿ ಎರಡೂ ವಾಹನಗಳು ರಸ್ತೆಗೆ ಪಲ್ಟಿಯಾಗಲು ಕಾರಣವಾಯಿತು ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಚಾಲಕರಿಬ್ಬರ ಗುರುತು ಇನ್ನಷ್ಟೆ ಪತ್ತೆಯಾಗಬೇಕಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.