ಬಂಟ್ವಾಳ: ಕಾಮಾಜೆಯ ಶಾಂತ ಅವರ ಮಗಳು ಶುಭಾ ಅವರ ಮಗಳ ಮದುವೆಯ ಸಹಾಯರ್ಥವಾಗಿ ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು ನೀಡಲಾಯಿತು. ಸಂಘದ ಅಧ್ಯಕ್ಷ ಬಾಸ್ಕರ್ ಟೈಲರ್, ಉಪಾಧ್ಯಕ್ಷ ವಿನೋದ್ ಕಾಮಾಜೆ , ಕಾರ್ಯದರ್ಶಿ ಉಮೇಶ್ ಕುಲಾಲ್ ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು.
ನವೂದಯ ಯುವಕ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ಬಾಸ್ಕರ್ ಟೈಲರ್ ಕಾಮಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿನೋದ್ ಕಾಮಾಜೆ, ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಮೈರಾನ್ಪಾದೆ, ಜತೆ ಕಾರ್ಯದರ್ಶಿಗಳಾಗಿ ರತೀಶ್ ಭಂಡಾರಿ ಮೈರಾನ್ಪಾದೆ ಹಾಗೂ ರಂಜಿತ್ ಕಾಮಾಜೆ, ಕೋಶಾಧಿಕಾರಿಯಾಗಿ ಶಶಿಧರ್ ಕಾಮಾಜೆ, ಕ್ರೀಡಾ ಕಾರ್ಯದಶರ್ಿಯಾಗಿ ರಾಜೇಶ್ ಭಂಡಾರಿ ಮೈರಾನ್ಪಾದೆ ಹಾಗೂ ದಿನೇಶ್ ಮೈರಾನ್ ಪಾದೆ ಆಯ್ಕೆಯಾಗಿದ್ದಾರೆ.