ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

12:00 AM, Wednesday, February 3rd, 2016
Share
1 Star2 Stars3 Stars4 Stars5 Stars
(5 rating, 6 votes)
Loading...
satish

ಪೆರ್ಲ: ವಿವಾಹಿತ ಯುವಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾದ ಘಟನೆ ಒಡ್ಯದಲ್ಲಿ ನಡೆದಿದೆ.

ಕುರೆಡ್ಕ ಐತ್ತಪ್ಪ ನಾಯ್ಕರ ಪುತ್ರ ಸತೀಶ(35)ಮೃತದೇಹ ಒಡ್ಯ ಸಮೀಪದ ಮಾಯಿಲಕ್ಕಾನದಲ್ಲಿರುವ ಇವರ ಮನೆಯಲ್ಲಿ ಅಜೀರ್ಣಾವಸ್ಥೆಯಲ್ಲಿ ಪತ್ತೆಯಾಗಿದೆ. ಶರೀರದಲ್ಲಿ ಯಾವುದೇ ಗಾಯಗಳಿಲ್ಲದಿರುವುದರಿಂದ ಮರಣಕ್ಕೆ ಸ್ಪಷ್ಟ ಕಾರಣ ತಿಳಿಯದಿರುವುದರಿಂದ ಉನ್ನತ ವೈದ್ಯಕೀಯ ಪರೀಕ್ಷೆಗೆ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮೃತದೇಹ ಕೊಂಡೊಯ್ಯಲಗಿದೆ.

ಸತೀಶ್ ಈ ಹಿಂದೆ ನಲ್ಕದಲ್ಲಿ ಹೋಟೆಲ್ ನಡೆಸುತ್ತಿದ್ದರು. ಮಾಯಿಲಕ್ಕಾನದಿಂದ ಮದುವೆಯಾಗಿ ಪತ್ನಿ ಗೃಹದಲ್ಲಿ ಇವರು ವಾಸಿಸುತ್ತಿದ್ದರು. ಇತ್ತೀಚೆಗೆ ಪತ್ನಿ ಮನೆಯಿಂದ ಸ್ವಲ್ಪ ಸೂರದಲ್ಲಿ ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದರು. ಸತೀಶರ ಅಪರಿಮಿತ ಮದ್ಯ ಸೇವನೆಯಿಂದ ನೊಂದು ಪತ್ನಿ ಮಕ್ಕಳು ತವರು ಮನೆಯಲ್ಲಿ ವಾಸಿಸುತ್ತಿದ್ದರು. ಸತೀಶನ ಗುಡಿಸಲಿನಿಂದ ಅಪರಿಮಿತ ವಾಸನೆ ಬರುವುದರಿಂದ ಪರಿಸರವಾಸಿಗಳು ಈ ಬಗ್ಗೆ ಪರಿಶೀಲನೆ ನಡೆಸಿದಾಗ ಭಾನುವಾರ ಮೃತದೇಹ ಪತ್ತೆಯಾಯಿತು. ಅಪರಿಮಿತ ಮದ್ಯಪಾನ ಮರಣಕ್ಕೆ ಕಾರಣವೆಂದು ಸಂಶಯಿಸಲಾಗಿದೆ.

ಬದಿಯಡ್ಕ ಪೋಲೀಸರು ಮಹಜರು ನಡೆಸಿದರು.ಮೃತನು ತಂದೆ,ತಾಯಿ,ಪತ್ನಿ,ಇಬ್ಬರು ಪುತ್ರಿಯರು,ಇಬ್ಬರು ಸಹೋದರರು,ಮೂವರು ಸಹೋದರಿಯರನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English