ಬದಿಯಡ್ಕ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಬಜೆಟ್ ನಲ್ಲಿ ಜನ ಸಾಮಾನ್ಯರಿಗೆ ಘೋಷಿಸಿದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಯಲ್ಲಿ ಬದಿಯಡ್ಕ ಸನಿಹದ ಕೆಡೆಂಜಿ ನಿವಾಸಿ ಇತ್ತೀಚೆಗೆ ಮೃತರಾದ ಸೀತಾರಾಮರ ಕುಟುಂಬಕ್ಕೆ2 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ.ಕೆ.ಶ್ರೀಕಾಂತ್,ಬದಿಯಡ್ಕ ಕೇರಳ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಸೀತಾರಾಮರ ಪತ್ನಿ ಸರೋಜಿನಿಯವರಿಗೆ ವಿತರಿಸಿದರು.