[1]ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳು ಅಕ್ರಮ ವ್ಯವಹಾರ ಹಾಗೂ ಕ್ರಿಮಿನಲ್ ಚಟುವಟಿಕೆ ಗಳಲ್ಲಿ ತೊಡಗಿದ್ದಾರೆ ಎಂಬ ದೂರಿನ ಅನ್ವಯ ಎಸಿಪಿ ರವೀಂದ್ರ ಗಡಾದಿ ಅವರ ನೇತ್ರತ್ವದಲ್ಲಿ ಇಂದು ಮಧ್ಯಾಹ್ನ ಅನಿರೀಕ್ಷಿತ ದಾಳಿ ನಡೆಸಿದ ಪೊಲೀಸರು ಜೈಲಿನಲ್ಲಿದ್ದ ಖೈದಿಗಳಿಂದ ಸಿಮ್ ಕಾರ್ಡ್, ಎರಡು ಮೊಬೈಲ್ ಫೋನ್ ಹಾಗೂ ಎರಡು ಪ್ಯಾಕೇಟ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಖೈದಿಗಳಿಗೆ ಗಾಂಜಾ ಹಾಗೂ ಮೊಬೈಲ್ ಫೋನ್ ಸಿಗುವಲ್ಲಿ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಿರುವ ಬಗ್ಗೆ ಸಂಶಯವಿದ್ದು ತನಿಖೆಯಿಂದ ತಿಳಿದು ಬರಬೇಕಿದೆ.
ಜೈಲಿನಲ್ಲಿ 253ಕೈದಿಗಳಿದ್ದು, ಇದರಲ್ಲಿ ಪುರುಷರು 239 ಹಾಗೂ ಮಹಿಳಾ ಕೈದಿಗಳು 14 ಮಂದಿ. ಜೈಲಿನ ಸಿಬ್ಬಂದಿಗಳ ಸಂಖ್ಯೆ ಇಬ್ಬರು ಮಹಿಳಾ ಸಿಬ್ಬಂದಿಗಳೂ ಸೇರಿ ಒಟ್ಟು 7 ಮಂದಿ ಕಾರ್ಯ ನಿರ್ವಾಹಿಸುತ್ತಿದ್ದಾರೆ. ಸಿಬ್ಬಂದಿಗಳ ಉಪಯೋಗಕ್ಕೆ 3 ವಾಹನಗಳಿದ್ದರೂ ಒರ್ವ ಚಾಲಕ ಮಾತ್ರ ಇಲ್ಲಿ ಕರ್ತವ್ಯಕ್ಕೆ ನಿರ್ವಹಿಸುತ್ತಿದ್ದಾರೆ..