ಅಶ್ವಿನಿ ಅಮಾಯಕಿ ಮದ್ದು ಸೇವಿಸಿ ಗೆಲ್ಲುವ ಅಗತ್ಯವಿಲ್ಲ :ಚಿಂದಾನಂದ್ ಶೆಟ್ಟಿ

2:35 PM, Tuesday, July 5th, 2011
Share
1 Star2 Stars3 Stars4 Stars5 Stars
(No Ratings Yet)
Loading...

Ashwini Akkunje/ಅಶ್ವಿನಿ ಅಕ್ಕುಂಜಿ ಮಂಗಳೂರು: ನನ್ನ ಮಗಳಿಗೆ ಮದ್ದು ಸೇವಿಸಿ ಗೆಲ್ಲುವ ಅಗತ್ಯವಿಲ್ಲ  ಡೋಪಿಂಗ್ ವಿವಾದದಲ್ಲಿ ಸಿಲುಕಿದ ಅಶ್ವಿನಿ ಅಕ್ಕುಂಜಿ ಅಮಾಯಕಳಾಗಿದ್ದಾಳೆ ಎಂದು ಅಶ್ವಿನಿ ತಂದೆ ಚಿಂದಾನಂದ್ ಶೆಟ್ಟಿ ಹೇಳಿದ್ದಾರೆ.
ಅಶ್ವಿನಿ ತನ್ನ ಪ್ರತಿಭೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ್ದಾರೆ. ಶೀಘ್ರದಲ್ಲಿ ಆರೋಪ ಮುಕ್ತಳಾಗುವ ವಿಶ್ವಾಸವಿದೆ ಎಂದು ಶೆಟ್ಟಿ ತಿಳಿಸಿದ್ದಾರೆ. ಡೋಪಿಂಗ್ ವಿವಾದದಿಂದಾಗಿ ಅಶ್ವಿನಿ ಕ್ರೀಡಜೀವನದ ಮೇಲೆ ಪರಿಣಾಮ ಬೀರದಿರಲಿ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.ಇಂತಹ ವಿವಾದಗಳಿಂದ ದೂರವಿರುವಂತೆ ಎಚ್ಚರಿಸಿದ್ದೆ. ಆದರೆ ಸುದ್ದಿ ತಿಳಿದು ಆಘಾತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ಪಂದ್ಯಾವಳಿಗಳಲ್ಲಿ ಚಿನ್ನದ ಪದಕ ಗಳಿಸಿದ ಅಶ್ವಿನಿ, ಇದೀಗ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿ ದೇಶದ ಕ್ರೀಡಾಕ್ಷೇತ್ರದ ಕೋಲಾಹಲಕ್ಕೆ ಕಾರಣವಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English