[1]ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಕಚೇರಿಯೆದುರು ಇಂದು ಮುಂಜಾನೆ ವಾಮಾಚಾರ ನಡೆಸಿರುವ ಕುರುಹುಗಳು ಪತ್ತೆಯಾಗಿದೆ. ಮೇಯರ್ ಪ್ರವೀಣ್ ಕುಮಾರ್ ಅವರ ಕಾರು ನಿಲ್ಲುವ ಜಾಗದಲ್ಲಿ ಮಂತ್ರಿಸಿದ ತಗಡು,ನಿಂಬೆಹಣ್ಣು, ಕುಂಬಳಕಾಯಿಯನ್ನು ಕಡಿದು ಅದಕ್ಕೆ ಕುಂಕುಮ ಸುರಿಯಲಾಗಿದೆ.ಲಾಲ್ಬಾಗ್ನ ಮಹಾನಗರ ಪಾಲಿಕೆ ಕಚೇರಿ ಎದುರುಗಡೆ ಮುಂಜಾನೆ ಕಾವಲು ಕಾಯುವ ವಾಚ್ಮೆನ್ಗೆ ವಾಮಾಚಾರದ ಕುರುಹು ಪತ್ತೆಯಾಗಿವೆ.ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
ಪಾಲಿಕೆಗೆ ವಾಚ್ಮೆನ್ ಇದ್ದರೂ,ರಾತ್ರಿಯ ವೇಳೆ ಯಾರೋ ವಾಚ್ಮೆನ್ ಕಣ್ಣು ತಪ್ಪಿಸಿ ವಾಮಾಚಾರ ಮಾಡಿರಬಹುದು ಎನ್ನಲಾಗಿದೆ. ಸ್ಥಳದಲ್ಲಿ ಪೂಜೆ ನಡೆಸಿರುವ ಕುರುಹು ಕೂಡಾ ಪತ್ತೆ ಯಾಗಿದ್ದು ಮೇಯರ್ ಅವರನ್ನೇ ಗುರಿಯನ್ನಾಗಿಸಿ ಈ ಕೃತ್ಯವೆಸಗಿರಬಹುದೆಂದು ಶಂಕಿ ಸಲಾಗಿದೆ. ಅಧಿಕಾರಿಗಳು ಹಾಗೂ ಕಾರ್ಪೊ ರೇಟರ್ಗಳ ನಡುವೆ ಮೇಯರ್ ಹೊಂದಾಣಿಕೆ ಹೊಂದಿಲ್ಲ ಎಂಬ ಆರೋಪ ಕೂಡಾ ಕೇಳಿಬರುತ್ತಿದ್ದು, ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳ ವಿರುದ್ಧ ಆರಂಭಿಸಿರುವ ಟೈಗರ್ ಕಾರ್ಯಾ ಚರಣೆ ಕೂಡಾ ಹಲವರ ವಿರೋಧಕ್ಕೆ ಕಾರಣವಾಗಿದ್ದನ್ನು ಸ್ಮರಿಸಬಹುದಾಗಿದೆ.ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿರುವ ವಾಮಾಚಾರ ಪ್ರಕರಣ ಭಾರೀ ಕುತೂಹಲಕ್ಕೆ ಕಾರಣವಾಗಿದೆ.