[1]ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರ ‘ಅಣ್ಣಾ ಬಾಂಡ್’ ಗೆ ಹಲವು ವರ್ಷಗಳ ಬಳಿಕ ಮತ್ತೆ ರಾಘವೇಂದ್ರ ರಾಜ್ ಕುಮಾರ್ ಹಾಡಲಿದ್ದಾರೆ. ದಶಕಕ್ಕೂ ಹಿಂದೆ ಗಜಪತಿ ಗರ್ವಭಂಗ ಚಿತ್ರದಲ್ಲಿ ಹಾಡಿ ಅಭಿನಯಿಸಿದ್ದರು. ಆಗ ಅಣ್ಣಾವ್ರ ಅಭಿಮಾನಿಗಳು ಅಪ್ಪನ ಥರ ಮಗನೂ ಅಭಿನಯದ ಜೊತೆಗೆ ಹಾಡೂತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ಒಂದೆರಡು ಚಿತ್ರದಲ್ಲಿ ಹಾಡಿ, ಬೆರಳೆಣಿಕೆಯ ಚಿತ್ರದಲ್ಲಿ ಅಭಿನಯಿಸಿ ವಿಶ್ರಾಂತಿ ಪಡೆದರು. ಒಲಿದ ಸ್ವರಗಳು ಒಂದಾದರೆ ಬಲು ಇಂಪಾದ ಸಂಗೀತಾ.., ಎನ್ನುತ್ತಿದ್ದರೆ ಪ್ರೇಕ್ಷಕರು ಹಾಡಲು ಶುರುವಚ್ಚಿಕೊಳ್ಳುತ್ತಿದ್ದರು. ‘ನಂಜುಂಡಿ ಕಲ್ಯಾಣ’ ಚಿತ್ರದಲ್ಲಿ “ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ…”ಎಂದು ಹಾಡಿದ್ದರು. ಆ ರೀತಿಯ ಕೋಮಲ ಕಂಠದ ಗಾಯಕ ರಾಘವೇಂದ್ರ ರಾಜ್ ಕುಮಾರ್. ಅವರ ಕಂಠದಲ್ಲಿ ಏನೋ ಒಂಥರಾ ಆಕರ್ಷಣೆ ಇತ್ತು.
ಈಗ ಬಹಳ ಸುದೀರ್ಘ ಸಮಯದ ಬಳಿಕ ಮತ್ತೆ ರಾಘವೇಂದ್ರರಾಜ್ ಕುಮಾರ್ ಹೊಸ ಹುರುಪಿನಿಂದ ಹಾಡಲು ಮುಂದಾಗಿದ್ದಾರೆ. ಆದರೆ ಈಗ ರಾಘಣ್ಣ ಹಾಡುತ್ತಿರುವುದು ಅವರ ಚಿತ್ರದಲ್ಲಿ ಅಲ್ಲ. ಅವರ ಸಹೋದರ ಈಗ ಪುನೀತ್ ರಾಜ್ ಕುಮಾರ್ ‘ಅಣ್ಣಾ ಬಾಂಡ್’ ಚಿತ್ರದಲ್ಲಿ.
‘ಮೈಲಾರಿ’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಶಿವರಾಜ್ ಕುಮಾರ್ಗಾಗಿ ಹಾಡಿದ್ದರು. ಈಗ ಪುನೀತ್ ಚಿತ್ರದಲ್ಲಿ ರಾಘಣ್ಣ ಹಾಡುತ್ತಿರುವುದು ವಿಶೇಷ. ಸಾಕಷ್ಟು ಗ್ಯಾಪ್ ಬಳಿಕ ಬರುತ್ತಿರುವ ಅವರ ಧ್ವನಿಯ ಏರಿಳಿತಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇದೆ.
ವರನಟ ಡಾ.ರಾಜ್ ಕುಮಾರ್ ಅವರ ಹಾಡುಗಾರಿಕೆಯ ಪ್ರಭಾವ ರಾಘಣ್ಣನ ಮೇಲೆ ಮುಂಚಿನಿಂದಲೂ ಇದೆ. ತಮ್ಮ ಚಿತ್ರಗಳಿಗೆ ತಾವೇ ಹಾಡಿಕೊಳ್ಳುತ್ತಿದ್ದ ರಾಘಣ್ಣ ಕೊನೆಯದಾಗಿ ಹಾಡಿದ ಚಿತ್ರ ‘ಸೂತ್ರಧಾರ’. ಈಗ ಮತ್ತೊಮ್ಮೆ ತಮ್ಮ ಕಂಠಸಿರಿಯನ್ನು ಸೊಬಗನ್ನು ಅಭಿಮಾನಿಗಳಿಗೆ ಕರುಣಿಸಿದ್ದಾರೆ.