ಉಪ್ಪಳ: ಮಂಗಳೂರಿನಿಂದ ಕಾಸರಗೋಡಿಗೆ ಬಸ್ನಲ್ಲಿ ಸಾಗಿಸುತ್ತಿದ್ದ 5.200 ಕಿಲೋ ಗಾಂಜಾ ಸಹಿತ ಓರ್ವನನ್ನು ವಾಮಂಜೂರು ಚೆಕ್ಪೋಸ್ಟ್ ನಲ್ಲಿ ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಚೆಕ್ಪೋಸ್ಟ್ ನಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದೆ.
ಮಂಗಳವಾರ ಸಂಜೆ 4 ಗಂಟೆಗೆ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನ್ನು ತಪಾಸಣೆ ನಡೆಸುತ್ತಿದ್ದಾಗ ಚೌಕಿ ಆಜಾದ್ ನಗರ ನಿವಾಸಿ ಮೊಹಮ್ಮದ್ರ ಪುತ್ರ ಅಹಮ್ಮದ್(45) ಎಂಬಾತನಿಂದ ಗಾಂಜಾ ವಶಪಡಿಸಲಾಗಿದ್ದು ಈತನನ್ನು ಸೆರೆಹಿಡಿದಿದ್ದಾರೆ. ಈ ಮಾಲನ್ನು ಕಾಸರಗೋಡು ರೈಲ್ವೇ ನಿಲ್ದಾಣಕ್ಕೆ ತಲುಪುವ ಕಲ್ಲಿಕೋಟೆ ನಿವಾಸಿಗೆ ಹಸ್ತಾಂತರಿಸಲು ಕೊಂಡೊ ಯ್ಯುತ್ತಿರುವುದಾಗಿ ತಿಳಿಸಿದ್ದಾನೆ.
ವಾಮಂಜೂರು ಚೆಕ್ಪೋಸ್ಟ್ನ ಅಬಕಾರಿ ಅಧಿಕಾರಿಗಳಾದ ಎನ್. ಶಂಕರನ್, ರೆನ್ನಿ ಫೆರ್ನಾಂಡೀಸ್, ಉಮ್ಮರ್ ಕುಟ್ಟಿ,ಮಂಜುನಾಥ ಆಳ್ವ,ಸುಧೀಶ್,ಸಜಿತ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆಗೆ ಸಹಕರಿಸಿತು.
Click this button or press Ctrl+G to toggle between Kannada and English