ಜಿಲ್ಲಾಧಿಕಾರಿ ನೇತೃತ್ವದಲ್ಲಿ ವ್ಯಾಪಕ ಕಾರ್ಯಾಚರಣೆ 100 ಲೋಡ್ ಹೊಯ್ಗೆ ವಶ

10:54 AM, Thursday, August 25th, 2016
Share
1 Star2 Stars3 Stars4 Stars5 Stars
(No Ratings Yet)
Loading...

Sandಕಾಸರಗೋಡು: ಜಿಲ್ಲಾಧಿಕಾರಿ ಕೆ. ಜೀವನ್ ಬಾಬುರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಕಂದಾಯ ಅಧಿಕಾರಿಗಳ ತಂಡ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಮರಳು ವಶಪಡಿಸಲಾಗಿದೆ.

ಮಂಜೇಶ್ವರ ಕೊಡ್ಲಮೊಗರಿನಲ್ಲಿ ನಡೆಸಿದ ದಾಳಿ ಮತ್ತು ತಪಾಸಣೆಯಲ್ಲಿ 100 ಲೋಡ್ ಮರಳುಗಳನ್ನು ಬುಧವಾರ ಮುಂಜಾನೆ ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿದೆ.

ಮಂಜೇಶ್ವರದ ಹೊರತಾಗಿ ಕಾಸರಗೋಡು, ಹೊಸದುರ್ಗ ಮತ್ತು ತೃಕರಿಪುರ ಎಂಬೆಡೆಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಮಂಜೇಶ್ವರದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಡೆಪ್ಯುಟಿ ಕಲೆಕ್ಟರ್ ಎನ್. ದೇವಿರಾಜ್, ಗ್ರಾಮಾಧಿಕಾರಿ ಮುಹಮ್ಮದ್ ಕುಂಞಿ, ಆಂಟೋ ಎಂಬವರು, ಕಾಸರಗೋಡಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಂಡೋಸಲ್ಫಾನ್ ಸ್ಪೆಷಲ್ ಸೆಲ್ ಡೆಪ್ಯುಟಿ ಕಲೆಕ್ಟರ್ ಅಬ್ದುಲ್ ಸಲಾಂ, ಉಪ ತಹಶೀಲ್ದಾರ್ ಗಳಾದ ಬಿನುಜೋರ್ಜ್ ಗ್ರಾಮಾಧಿಕಾರಿ ರಮೇಶನ್ ಎಂಬವರು ಒಳಗೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English