[1]ಪುಣೆ: ಜನಪ್ರಿಯ ರಿಯಾಲಿಟಿ ಶೋ “ಬಿಗ್ಬಾಸ್” ನಲ್ಲಿ ಭಾಗವಹಿಸಲು ತಮಗೆ ಆಫರ್ ಬಂದಿದೆ ಎಂದು ಶನಿ ಶಿಂಗಣಾಪುರ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ಆಂದೋಲನ ನಡೆಸುವ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿಕೊಂಡಿದ್ದಾರೆ.
ರಿಯಾಲಿಟಿ ಶೋ ನಡೆಸಿಕೊಡುವ ಕಲರ್ ಚಾನಲ್ ತನ್ನನ್ನು ಸಂಪರ್ಕಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಕುರಿತು ಚಿಂತಿಸುತ್ತಿರುವುದಾಗಿ ಹೇಳಿದ್ದಾರೆ.
ಬಿಗ್ಬಾಸ್ನಲ್ಲಿ ಭಾಗವಹಿಸಲು ನಾನು ಸಿದ್ಧನಿದ್ದೇನೆ. ಆದರೆ, ಕಾರ್ಯಕ್ರಮ ಪ್ರಸಾರದ ವೇಳೆ ಬರುವ ವಾಯ್ಸ ಓವರ್ ಮಹಿಳೆ ಯದ್ದಾಗಿದ್ದರೆ ಮಾತ್ರ ಪಾಲ್ಗೊಳ್ಳುವೆ ಎಂದು ಷರತ್ತು ವಿಧಿಸಿರುವುದಾಗಿ ತೃಪ್ತಿ ದೇಸಾಯಿ ತಿಳಿಸಿದ್ದಾರೆ.