[1]ಮಂಗಳೂರು: ಜೈಲಿನಲ್ಲಿ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದ ಮೂವರನ್ನು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಬಂಧಿಸಲಾಗಿದೆ.
ಸ್ಟೀವನ್, ಪ್ರಶಾಂತ್, ಸೂರಜ್ ಬಂಧಿತ ಆರೋಪಿಗಳು. ಇವರು ತೊಕ್ಕೊಟ್ಟು ಸಮೀಪದ ಕುತ್ತಾರ್ ನಿವಾಸಿಗಳು. ಇವರು ಉಳ್ಳಾಲ ಮೂಲದ ಕೈದಿಗೆ ಗಾಂಜಾ ಪೂರೈಕೆಗೆ ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಜೈಲು ಸಿಬಂದಿ ಮಾಹಿತಿಯಂತೆ ಬರ್ಕೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.