ಅಣ್ಣಾ ಹಜಾರೆ ಬೆಂಬಲಿಗರಿಂದ ಮೈಕಿಗಾಗಿ ಕಿತ್ತಾಟ

12:19 PM, Wednesday, August 17th, 2011
Share
1 Star2 Stars3 Stars4 Stars5 Stars
(No Ratings Yet)
Loading...

Anna Hazare followers / ಅಣ್ಣಾ ಹಜಾರೆ ಬೆಂಬಲಿಗರು

ಮಂಗಳೂರು : ದೆಹಲಿಯಲ್ಲಿ ಅಣ್ಣಾ ಹಜಾರೆ ಕೇಂದ್ರ ಸರ್ಕಾರದ ವಿರುದ್ದ ಸಮರ ಸಾರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೆ, ಮಂಗಳೂರಲ್ಲಿ ಅಣ್ಣಾ ಹಜಾರೆ ಬೆಂಬಲಕ್ಕೆ ಬಂದಿದ್ದ ಎರಡು ಬಣಗಳು ಮೈಕಿಗಾಗಿ ಸೆಣಸಾಟ ನಡೆಸಿ ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡ ಘಟನೆ ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಯಿತು.

ಭ್ರಷ್ಟಾಚಾರ ವಿರೋಧಿ ವೇದಿಕೆ ಮತ್ತು ಲೋಕಪಾಲ ಮಸೂದೆ ಪರ ಗುಂಪುಗಳು ಅಣ್ಣಾ ಹಜಾರೆ ಅವರಿಗೆ ಪ್ರತೇಕವಾಗಿ ಬೆಂಬಲ ನೀಡಲು ಮುಂದಾದವು. ಸಾರ್ವಜನಿಕ ಭಾಷಣ ಮಾಡಲು ಎರಡೂ ಬಣಗಳು ತುದಿಗಾಲಲ್ಲಿ ನಿಂತಿದ್ದವು. ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕೊಡಬೇಕೆನ್ನುವುದು ಒಂದು ಬಣದ ವಾದವಾದರೆ . ಮತ್ತೊಂದು ಗುಂಪು ಲೋಕಪಾಲ ಮಸೂದೆ ಬಗ್ಗೆ ನಮಗೂ ಮಾತನಾಡಲು ಅವಕಾಶ ಕೊಡಬೇಕು ಎಂದು ಕಚ್ಚಾಟ ನಡೆಸಿತು.

ಅಂತಿಮವಾಗಿ ಹಿರಿಯ ಗಾಂಧಿವಾದಿ ನಾಮದೇವ್ ಶೆಣೈ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಕೊನೆಗೆ ಎರಡು ಬಣಗಳು ಅಣ್ಣಾ ಹಜಾರೆಯವರಿಗೆ ಬೆಂಬಲ ಸೂಚಿಸುವ ಮೂಲಕ ಪ್ರಕರಣ ತಣ್ಣಗಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English