- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಡಿ.ಕೆ.ಶಿವಕುಮಾರ್ ಮೇಲೆ ಐ.ಟಿ. ದಾಳಿ ಕೇಂದ್ರ ಸರ್ಕಾರದ ಹೀನ ಕೆಲಸ : ಪೂಜಾರಿ

BJ poojary [1]ಮಂಗಳೂರು: ರಾಜ್ಯ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ, ಕಚೇರಿ, ಮತ್ತು ಸಂಭಂದಿಕರ ಮೇಲೆ ನಡೆದಿರುವ ಐ.ಟಿ. ದಾಳಿ ಕೇಂದ್ರ ಸರ್ಕಾರದ ಹೀನ ಕೆಲಸ ಎಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಮಾಜಿ ಸಂಸದ  ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಐಟಿ ಇಲಾಖೆ ಯಾವ ಪಕ್ಷ, ವ್ಯಕ್ತಿಗೆ ಸೇರಿದ ಇಲಾಖೆ ಅಲ್ಲ. 39 ಕಡೆ ಸಿಆರ್‌ಪಿಎಫ್ ಜೊತೆ ದಾಳಿ ನಡೆಸಿದೆ. ಅದನ್ನು ತಮ್ಮಿಚ್ಛೆಯಂತೆ ಬಳಸುತ್ತಿರುವುದು ಸರಿಯಲ್ಲ, ಇದರಿಂದ ಸಿಆರ್‌ಪಿಎಫ್ ಮಾನ ಮರ್ಯಾದೆ ಕೂಡ ಹಾಳಾಗಿದೆ ಎಂದರು.

ಐಟಿ ದಾಳಿಗೆ ಮುನ್ನ ಕೆಲವೊಂದು ಕಾನೂನು ಪ್ರಕ್ರಿಯೆ ನಡೆಸಬೇಕಿತ್ತು. ಸಚಿವ ಡಿ.ಕೆ.ಶಿವಕುಮಾರ್ ಅವರೇನು ಉಗ್ರರೇ? ಮೋದಿ ವಿರುದ್ಧ ಮಾತನಾಡಿದ ನಾಯಕರ ಮೇಲೆ ಹೀಗೆ ಮಾಡುವುದೇ? ಮೋದಿಗೆ ಸಾಮಾನ್ಯ ಜ್ಞಾನ ಇಲ್ಲವೇ? ಎಂದು ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಈ ದಾಳಿ ನಡೆಸಲಾಗಿದೆ. ಜನರು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಚುನಾವಣೆ ವೇಳೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.