ಸುಳ್ಯ : ಸುಳ್ಯ ತಾಲೂಕಿನ ಪಂಜ ನಾಡ ಕಚೇರಿಯ ರೆವಿನ್ಯೂ ಇನ್ಸ್ಪೆಕ್ಟರ್ ದಯಾನಂದ್ ಎಸಿಬಿಗೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಮೀನಿಗಾಗಿ ಲಂಚ ಪಡೆಯುತ್ತಿದ್ದ ರೆವಿನ್ಯೂ ಇನ್ಸ್ಪೆಕ್ಟರ್ ದಯಾನಂದ್, 94 ರ ಅಡಿಯಲ್ಲಿ ಜಾಗ ಮಂಜೂರು ಮಾಡಲು ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಚಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾನೆ.
ಹರೀಶ್ ಎನ್ನುವ ವ್ಯಕ್ತಿಯಿಂದ 9 ಸೆಂಟ್ಸ್ ಜಾಗವನ್ನು ಮಂಜೂರು ಮಾಡುವುದಕ್ಕಾಗಿ ದಯಾನಂದ್ ಎಂಟು ಸಾವಿರ ರೂ. ಬೇಡಿಕೆ ಇಟ್ಟಿದ್ದ. ಈ ಸಂಬಂಧ ಎಸಿಬಿ ಪೊಲೀಸರಿಗೆ ಹರೀಶ್ ವಿಷಯ ತಿಳಿಸಿದ್ದ. ಆದರೆ ಇಂದು ಹಣ ನೀಡುವುದಾಗಿ ದಯಾನಂದ್ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಪೊಲೀಸರು ದಯಾನಂದನನ್ನು ವಶಕ್ಕೆ ಪಡೆದಿದ್ದಾರೆ.
Click this button or press Ctrl+G to toggle between Kannada and English