[1]ಮಂಗಳೂರು: ಪುತ್ತೂರು ನಗರ ಪೊಲೀಸರು 39 ವರ್ಷಗಳ ಹಿಂದೆ ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪುತ್ತೂರು ತಾಲೂಕಿನ ಮುಡ್ನೂರು ಗ್ರಾಮದ ಸಿ.ಹೆಚ್. ಅಬ್ದುಲ್ ಖಾದರ್ ಎಂಬಾತ 1979ರಲ್ಲಿ 13 ಮಂದಿ ಇತರರೊಂದಿಗೆ ಸೇರಿ ಅಬ್ದುಲ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದ. ಘಟನೆಯ ನಂತರ ಈತ ಬಹರೈನ್ಗೆ ತೆರಳಿ ತಲೆಮರೆಸಿಕೊಂಡಿದ್ದ.
2010 ರಲ್ಲಿ ಸ್ವದೇಶಕ್ಕೆ ಮರಳಿದ ಈತ ತನ್ನ ವಿಳಾಸ ಬದಲಿಸಿ ಪುತ್ತೂರು ತಾಲೂಕಿನ ಕಾವು ಗ್ರಾಮದ ಬಂಡಿಚಾಲದಲ್ಲಿ ವಾಸವಿದ್ದ. ಈ ಬಗ್ಗೆ 38 ವರ್ಷಗಳ ಬಳಿಕ ವಿಷಯ ತಿಳಿದ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ.