- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಿರಿಯಾರಪಟ್ಟಣ: ಸಿಡಿಲಿನ ಆರ್ಭಟಕ್ಕೆ ಒಂದೇ ಕಡೆ 7 ಮಂದಿ ದುರ್ಮರಣ

mysuru [1]ಮೈಸೂರು: ತಾಲೂಕಿನ ನಂದಿ ನಾಥಪುರದಲ್ಲಿ ಸಿಡಿಲು ಬಡಿದು ಒಂದೇ ಕಡೆ 6 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಭೀಕರ ದುರ್ಘ‌ಟನೆ ಗುರುವಾರ ನಡೆದಿದೆ.

ಮೃತ ದುರ್ದೈವಿಗಳು ಹುಣಸವಾಡಿ ನಿವಾಸಿಗಳು ಎಂದು ತಿಳಿದು ಬಂದಿದೆ. ಸುಜಯ್‌ (15)ಸುವರ್ಣಮ್ಮ (45)ಪುಟ್ಟಣ್ಣ(60) ಸುದೀಪ್‌, ತಿಮ್ಮೇಗೌಡ, ಉಮೇಶ್‌, ಪ್ರವೀಣ್‌ ಎನ್ನುವವರು ಮೃತ ಪಟ್ಟಿರುವುದಾಗಿ ವರದಿಯಾಗಿದೆ.

ಹೊಲದಲ್ಲಿ ದನಗಳನ್ನು ಮೇಯಿಸುತ್ತಿದ್ದ ವೇಳೆ ಸಿಡಿಲು ಬಡಿದಿದೆ ಎಂದು ಹೇಳಲಾಗಿದೆ. ನಾಲ್ವರು ಸಿಡಿಲಿನಾಘಾತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಪಿರಿಯಾರಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.