[1]ಮಂಗಳೂರು :ಕಾವೂರು ಠಾಣಾ ಪೊಲೀಸರು ಕಾವೂರು-ಕೂಳೂರು ರಸ್ತೆಯ ಗುಡ್ಡೆ ಅಂಗಡಿ ಎಂಬಲ್ಲಿ ಗುರುವಾರ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಕುಳಾಯಿ ದ್ವಾರಕನಗರದ ನಿವಾಸಿ ಮಯ್ಯಿದ್ದಿ(31) ಮತ್ತು ತೊಕ್ಕೊಟ್ಟು ನಿವಾಸಿ ರತನ್ ಮೆಂಡನ್(32) ಬಂಧಿತ ಆರೋಪಿಗಳು.
ಗಾಂಜಾವನ್ನು ಪೊಲೀಸರು ಆರೋಪಿಗಳಿಂದ 1ಕೆಜಿ 250 ಗ್ರಾಂ ವಶಪಡಿಸಿಕೊಂಡಿದ್ದಾರೆ. ಉರುಂದಾಡಿಗುಡ್ಡೆಯ ಸುರೇಶ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಗ್ರಾಹಕರಾದ ಇತರ ಏಳು ಮಂದಿಯನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳ ಬಳಿಯಿದ್ದ ಒಂದು ಪಿಕ್ಅಪ್ ವಾಹನ, ಒಂದು ಆ್ಯಕ್ಟಿವಾವನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.