- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾರಂತರ ಬಂಧನ ಪ್ರಕರಣ, ಮೂಡಬಿದಿರೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳದ ಖಂಡನೆ

Jagadhish karanth [1]ಮೂಡಬಿದಿರೆ: ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ ಕಾರಂತರ ಬಂಧನ ಪ್ರಕರಣವನ್ನು ಮೂಡಬಿದಿರೆ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ ಖಂಡಿಸಿದೆ.

ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕುವುದರ ಮೂಲಕ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಈ ಬಗ್ಗೆ ರಾಜ್ಯಪಾಲರು ರಾಜ್ಯ ಸರಕಾರಕ್ಕೆ ಸೂಕ್ತ ಎಚ್ಚರಿಕೆಯನ್ನು ನೀಡಬೇಕಾಗಿ ಕೋರುವ, ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್‌ ಸಹಿ ಮಾಡಿರುವ ಮನವಿಯನ್ನು ಮೂಡಬಿದಿರೆ ತಹಶೀಲ್ದಾರರಿಗೆ ಸಲ್ಲಿಸಲಾಯಿತು. ವಿ.ಹಿಂ.ಪ. ಕಾರ್ಯದರ್ಶಿ ಶಾಂತರಾಮ ಕುಡ್ವ, ಗುರುಪುರ ಹಿ.ಜಾ.ವೇದಿಕೆ ಅಧ್ಯಕ್ಷ ಸುಕುಮಾರ್‌, ರಾ. ಸ್ವ.ಸಂ.ದ ವಿವೇಕಾನಂದ ಕಾಮತ್‌, ಕೆ.ಪಿ. ಜಗದೀಶ ಅಧಿಕಾರಿ, ಸುದರ್ಶನ ಎಂ., ಕೆ. ಆರ್‌. ಪಂಡಿತ್‌ ಉಪಸ್ಥಿತರಿದ್ದರು.