[1]ಮಂಗಳೂರು: ಸಿಸಿಬಿ ಪೊಲೀಸರು ಬಜ್ಜೋಡಿ ಎರಡನೇ ಅಡ್ಡರಸ್ತೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉರ್ವ ಹ್ಯೊಗೆಬೈಲಿನ ಆಲ್ವಿನ್ ಕ್ಲಿಂಟನ್ (24), ಬಿಕರ್ನಕಟ್ಟೆಯ ಅಜೇಯ್ ಸೆಬಾಸ್ಟಿಯನ್ ಲೋಬೊ (24), ಬಜ್ಜೋಡಿಯ ಜೋಯೆಲ್ ಫರ್ನಾಂಡಿಸ್ (27), ಪಡೀಲ್ನ ಆದಿತ್ಯ (18), ಪಡೀಲ್ ಅಳಪೆಯ ದೇವರಾಜ್ (21), ಮೂಡುಶೆಡ್ಡೆಯ ಅಕ್ಷಯ್ ಸಾಲಿಯಾನ್ (21) ಹಾಗೂ ಎಂ.ಜಿ. ರಸ್ತೆಯ ಅಮೋಘ್ ಹೆಗ್ಡೆ (27) ಬಂಧಿತರು.
ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಸುನೀಲ್ ನಾಯಕ್ ಹಾಗೂ ಅವರ ತಂಡ ಬಜ್ಜೋಡಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದಾಗ ವಶಕ್ಕೆ ಯುವಕರನ್ನು ಪಡೆದುಕೊಂಡಿದ್ದು, ಬಳಿಕ ಕಂಕನಾಡಿ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಕಾನೂನು ಸುವ್ಯವಸ್ಥೆಯ ಡಿಸಿಪಿಯ ಹನುಮಂತಯ್ಯ, ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.