ಬಂಟ್ವಾಳ: ತೆಂಗಿನಕಾಯಿ ಗೋಡೌನ್ ವೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಗುರುವಾರ ಬೆಳಗ್ಗೆ ಕಲ್ಲಡ್ಕದಲ್ಲಿ ನಡೆದಿದೆ.
ಕಲ್ಲಡ್ಕದ ವರ್ತಕ ದಿನೇಶ್ ಶೆಣೈ ಎಂಬವರಿಗೆ ಸೇರಿದ ಈ ದಾಸ್ತಾನು ಕೊಠಡಿಯಲ್ಲಿ ಸಾವಿರಾರು ತೆಂಗಿನಕಾಯಿ ಹಾಗೂ ತೆಂಗಿನ ಚಿಪ್ಪು ದಾಸ್ತಾನು ಮಾಡಲಾಗಿತ್ತು. ಗುರುವಾರ ಬೆಳಗಿನ ಜಾವ ದಾಸ್ತಾನು ಕೊಠಡಿಯಿಂದ ಹೊಗೆ ಕಂಡು ಬಂದಿದೆ. ಬಳಿಕ ಪರಿಶೀಲನೆ ನಡೆಸಿದಾಗ ಬೆಂಕಿ ತಗಲಿರುವುದು ಗೊತ್ತಾಗಿದೆ.
ತಕ್ಷಣವೇ ಬಂಟ್ವಾಳ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು, ತಕ್ಷಣ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಆ ವೇಳೆಗಾಗಲೇ ಲಕ್ಷಾಂತರ ಮೌಲ್ಯದ ತೆಂಗಿನಕಾಯಿ ಸುಟ್ಟು ಕರಕಲಾಗಿದೆ. ಕೊಠಡಿಯ ಮೇಲ್ಛಾವಣಿ ಹಾಗೂ ಕಿಟಕಿಗಳಿಗೂ ಬೆಂಕಿ ತಗುಲಿತ್ತು.
Click this button or press Ctrl+G to toggle between Kannada and English