ಮಂಗಳೂರು: ನಗರದ ಕೊಡಿಯಾಲ್ಬೈಲ್ನ ‘ದಿ ಓಶಿಯನ್ ಪರ್ಲ್’ ನಲ್ಲಿ ಹೆಸರಾಂತ ಸರಕಾರಿ ಸ್ವಾಮ್ಯದ ಸಂಸ್ಥೆಯವರು ಉದ್ಯೋಗವಕಾಶದ ವಿಚಾರ ಸಂಕಿರಣವನ್ನು ಡಿ. 21ರಂದು ಬೆಳಗ್ಗೆ 10:30ಕ್ಕೆ ಆಯೋಜಿಸಿರುವರು.
ಉದ್ಯೋಗಾಕಾಂಕ್ಷಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಆಯ್ಕೆಯಾದಲ್ಲಿ ಮಾಸಿಕ 1 ಲಕ್ಷ ರೂ.ಗಿಂತ ಅಧಿಕ ವರಮಾನ ಪಡೆಯುವ ಸದವಕಾಶವಿರುತ್ತದೆ.
ಪುಣೆ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪಡೆದು 23 ವರ್ಷಗಳ ಕಾಲ ಸುದೀರ್ಘ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ದೊಂದಿಗೆ ಸೇವಾ ವೃತ್ತಿಯಿಂದ ಮಾಲಕತ್ವದೆಡೆ ಪರಿವರ್ತಿತರಾದ ಶ್ರೀ ದಿನೇಶ್ ನಾರಾಯಣ ಪೈಯವರು ಈ ವಿಚಾರ ಸಂಕಿರಣ ನಿರ್ವಹಿಸಲಿದ್ದು, ಇವರ ತಂಡದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಅನಿವಾಸಿ ಭಾರತೀಯರು, ನಿವೃತ್ತ ಸರಕಾರಿ ಸಿಬ್ಬಂದಿ, ಸ್ವಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಗೃಹಿಣಿಯರು ಸಕ್ರಿಯರಾಗಿರುವರು.
ಈ ಸ್ವಉದ್ಯೋಗದಿಂದ ತಮಗೆ ಪಟ್ಟಾಯ ಮತ್ತು ರೋಮ್ ದೇಶಕ್ಕೆ ಪ್ರವಾಸ ಕೈಗೊಳ್ಳುವ ಅವಕಾಶ ಬಂದಿರುವುದನ್ನು ಪೈಯವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆಸಕ್ತರು ತಮ್ಮ ಕನಸು ನನಸಾಗಲು ಹಾಗೂ ಸ್ವ ಉದ್ಯೋಗ ಹೊಂದಲು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಬಹುದಾಗಿದೆ.
Click this button or press Ctrl+G to toggle between Kannada and English