- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಮಹಾ ನಾಟಕ: ಶೆಟ್ಟರ್

jagadish-shetter [1]ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಮಹಾ ನಾಟಕ ಆಡುತ್ತಿದೆ ಎಂದು ಪ್ರತಿಪಕ್ಷ ನಾಯಕ‌ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಗೋವಾ ಸಿಎಂ ಮನವೊಲಿಸುವ ಮಾತನ್ನು ನಮಗೆ ಕೇಳಿದ್ದರು. ಹಾಗಾಗಿ ನಾವು ಗೋವಾ ಸಿಎಂ ಮನವೊಲಿಸಿ ಪತ್ರ ತಂದಿದ್ದೇವೆ. ಅದನ್ನೇ ನ್ಯಾಯಾಧೀಕರಣ ಮುಂದೆ ಹಾಜರಪಡಿಸಬೇಕಾಗಿತ್ತು ಎಂದರು.

ನೀವು ಗೋವಾದ ಪ್ರತಿಪಕ್ಷವಾದ ಕಾಂಗ್ರೆಸ್ ನಾಯಕರ ಮನವೊಲಿಸಿ ಪತ್ರ ತರಬೇಕಾಗಿತ್ತು‌. ಯಾಕೆ ತಂದಿಲ್ಲ? ಕಾಂಗ್ರೆಸ್ ನಾಯಕರಿಗೆ ಮಹದಾಯಿ ವಿವಾದ ಇತ್ಯರ್ಥಪಡಿಸುವ ಮನಸ್ಸಿಲ್ಲದೆ ರಾಜಕೀಯ ಮಾಡುತ್ತಿದೆ ಎಂದು ಶೆಟ್ಟರ್‌‌ ಕಿಡಿಕಾರಿದರು.