[1]ಮೂಡುಬಿದಿರೆ : ಬಾಳೆಹೊನ್ನೂರಿನಲ್ಲಿ ನಡೆದ ರಾಜ್ಯಮಟ್ಟದ ಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಜೂನಿಯರ್ ತಂಡವು ಆಳ್ವಾಸ್ ಸೀನಿಯರ್ ತಂಡದ ಎದುರು ೩ ವಿಕೆಟ್ಗಳ ಜಯವನ್ನು ಗಳಿಸಿ ಪ್ರಶಸ್ತಿಯನ್ನು ಪಡೆಯಿತು.
ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಆಳ್ವಾಸ್ ಜೂನಿಯರ್ ತಂಡದ ಅಭಿಲಾಷ್ ಶೆಟ್ಟಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರಾಹುಲ್ ಇಂಜಲಿಕರ್ ಪಡೆದರು.ಆಳ್ವಾಸ್ ಸೀನಿಯರ್ ತಂಡದ ಲಾಲ್ ಸಚಿನ್ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಪಡೆದರು.
ಸೆಮಿಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಸೀನಿಯರ್ ತಂಡವು ಮಹೇಶ್ ಬೆಂಗಳೂರು ತಂಡವನ್ನು ಸೋಲಿಸಿತು. ಆಳ್ವಾಸ್ ಜೂನಿಯರ್ ತಂಡವು ಸುನಿಲ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ಸ್ಗೆ ಪ್ರವೇಶ್ ಪಡೆದರು