- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಚಿವ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಸಿದ್ದ, ಸಿಎಂ ದೆಹಲಿಗೆ

[1]ಬೆಂಗಳೂರು : ರಾಜ್ಯ ಸಚಿವ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಸಿದ್ದಗೊಂಡಿದ್ದು, ಇಂದು ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ  ಅಂತಿಮ ಪಟ್ಟಿ ತಯಾರಿಸಲಾಗಿದೆ. ಇದೀಗ ದೆಹಲಿನಲ್ಲಿರುವ ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಬಿ. ಎಸ್ ಯಡ್ಡಿಯೂರಪ್ಪ ದೆಹಲಿಗೆ ಪಯಾಣಿಸಿದ್ದಾರೆ.
ಗೃಹ ಸಚಿವ ವಿ ಎಸ್ ಆಚಾರ್ಯ ಸಿಎಂ ಜತೆ  ದೆಹಲಿಗೆ ಪಯಾಣಿಸಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಜತೆ ನಡೆಯಲಿರುವ ಚರ್ಚೆ ಬಳಿಕ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಬಿಡುಗಡೆ ಗೊಳ್ಳಲಿದೆ.
ಸಿಎಂ ನಿವಾಸದಲ್ಲಿ  ಈಶ್ವರಪ್ಪ ಮತ್ತು ರಾಜ್ಯಸಭಾ ಸದಸ್ಯ ವೆಂಕಯ್ಯನಾಯ್ಡು ಸಂಪುಟ ವಿಸ್ತರಣೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಸಚಿವ ಸಂಪುಟ ಪುನರಾಚನೆಯ ಶೋಭಾ ಕರಂದ್ಲಾಜೆ, ಆನೇಕಲ್ ನಾರಾಯಣಸ್ವಾಮಿ, ವಿ. ಸೋಮಣ್ಣ, ಸಿ. ಸಿ ಪಾಟೀಲ್ ಎ. ರಾಮದಾಸ್ ಮತ್ತು ಸಿ. ಎಚ್ ವಿಜಯ್ ಶಂಕರ್  ಹೆಸರುಗಳನ್ನು ಹಾಕಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಸಕ್ತ ಶಾಸಕರಾದ ಮುಮ್ತಾಜ್ ಅಲಿಕಾಲ್, ಅರವಿಂದ ಲಿಂಬಾವಳಿ, ಶಿವನಗೌಡ ನಾಯಕ್, ಗೂಳಿಹಟ್ಟಿ ಶೇಖರ್‌ರನ್ನು ಕೈಬಿಡವ ಬಗ್ಗೆಯು ಅಂತಿಮ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.