[1]ಬಂಟ್ವಾಳ: ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತ ಪ್ರಶಾಂತ ಕುಲಾಲ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಿಜೆಪಿ ನಡಿಗೆ ಗ್ರಾಮದ ಕಡೆಗೆ ಪಾದಯಾತ್ರೆಯ 9ನೇ ದಿನದ ಸಭಾ ಕಾರ್ಯಕ್ರಮ ಸೋಮವಾರ ರಾತ್ರಿ ಕಲ್ಲಡ್ಕದಲ್ಲಿ ನಡೆದಿದ್ದು, ಈ ಸಂದರ್ಭ ಸುನಿಲ್ಕುಮಾರ್ ಜನರಲ್ಲಿ ಧಾರ್ಮಿಕ ಭಾವನೆ ಕೆರಳುವಂತೆ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಈ ಚುನಾವಣೆ ರಾಜೇಶ್ ನಾೖಕ್, ರಮಾನಾಥ ರೈ ನಡುವಿನ ಚುನಾವಣೆಯಲ್ಲ. ಅಲ್ಲಾ ಮತ್ತು ರಾಮ ನಡುವಿನ ಚುನಾವಣೆ. ನೀವು ಅಲ್ಲನನ್ನು ಪ್ರೀತಿಸುವರಿಗೆ ಅಥವಾ ರಾಮನನ್ನು ಪ್ರೀತಿಸುವವರಿಗೆ ಮತ ನೀಡುತ್ತೀರೋ ಎಂದು ನಿರ್ಧರಿಸಿ ಎಂಬುದಾಗಿ ಹೇಳಿದ್ದಾರೆ. ಇದು ಧಾರ್ಮಿಕ ಭಾವನೆ ಪ್ರಚೋದಕ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.