ಮಂಗಳೂರು: ಅಬ್ಬಕ್ಕ ಉತ್ಸವ ಪ್ರಚಾರ ಸಮಿತಿಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ಅಬ್ಬಕ್ಕ ಉತ್ಸವ ನಿನ್ನೆ ತೆರೆ ಕಂಡಿತು.
ಸಮಾರೋಪ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಆಹಾರ ಸಚಿವ ಯು.ಟಿ. ಖಾದರ್, ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಮೇಯರ್ ಕವಿತಾ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.
ಸಾಹಿತಿ ಸಾರಾ ಅಬೂಬಕ್ಕರ್ ಹಾಗೂ ಚಿತ್ರನಟಿ ವಿನಯಾ ಪ್ರಸಾದ್ ಅವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮುಂದಿನ ವರ್ಷ ಅಬ್ಬಕ್ಕ ಉತ್ಸವವನ್ನು ಬಂಟ್ವಾಳದಲ್ಲಿ ನಡೆಸಲು ನಿರ್ಧರಿಸಲಾಗಿದೆ.
Click this button or press Ctrl+G to toggle between Kannada and English