[1]ಮಂಗಳೂರು: ನಗರದ ಸ್ಕಿಲ್ ಗೇಮ್ ಕೇಂದ್ರಗಳಿಗೆ ದಾಳಿ ನಡೆಸಿ ಸುದ್ದಿಯಾಗಿದ್ದ ಮೇಯರ್ ಕವಿತಾ ಸನಿಲ್ ಹಾಗೂ ಅವರ ತಂಡಕ್ಕೆ ಹೈಕೋರ್ಟ್ ಶಾಕ್ ನೀಡಿದೆ.
ಕಳೆದ ಬಾರಿ ಫಳ್ನೀರ್ನ ಸ್ಕಿಲ್ ಗೇಮ್ಗೆ ದಾಳಿ ನಡೆಸಿದ ಮೇಯರ್ ಕವಿತಾ ಸನಿಲ್ ವಿರುದ್ಧ ಮಾಲಕಿ ಸಜಿತಾ ರೈ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಕವಿತಾ ಸನಿಲ್, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಪೊಲೀಸ್ ಕಮಿಷನರ್ ಟಿ. ಆರ್. ಸುರೇಶ್ ಹಾಗೂ ಪಾಂಡೇಶ್ವರ ಠಾಣೆಯ ವೃತ್ತ ನಿರೀಕ್ಷಕರಾದ ಕೆ.ಯು. ಬೆಳ್ಳಿಯಪ್ಪ ಅವರಿಗೆ ಕೋರ್ಟ್ ನೋಟೀಸು ಜಾರಿ ಮಾಡಿದೆ.
ಸ್ಕಿಲ್ಗೇಮ್ ಮೇಲೆ ನಡೆಸಿದ್ದ ದಾಳಿಯೇ ಅಕ್ರಮ ಎಂದು ಕೋರ್ಟ್ ಹೇಳಿದ್ದು, ಕವಿತಾ ಸನಿಲ್, ಮಂಜಯ್ಯ ಶೆಟ್ಟಿ ಹಾಗೂ ಬೆಳ್ಳಿಯಪ್ಪ ಅವರು ಸಜಿತಾ ರೈಯವರಿಗೆ ಸೂಕ್ತ ಪರಿಹಾರ ನೀಡಲು ಪೊಲೀಸ್ ಕಮಿಷನರ್ ಅವರಿಗೆ ನಿರ್ದೇಶನ ನೀಡಿದೆ.
ಹಿರಿಯ ನ್ಯಾಯವಾದಿಗಳಾದ ಲಕ್ಷ್ಮೀನಾರಾಯಣ ಹಾಗೂ ವಿನೋದ್ ಕುಮಾರ್ ದೂರುದಾರರ ಪರವಾಗಿ ವಾದಿಸಿದ್ದರು.