[1]ಮೂಡಬಿದಿರೆ: ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರೂ. ವಿನಿಯೋಗಿಸಲಾಗಿದೆ. ಗ್ರಾಮದ ಅಭಿವೃದ್ಧಿಯೇ ಸರಕಾರದ ಮೂಲ ಉದ್ದೇಶವಾಗಿದ್ದು, ಜನಪರ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಅವರು ಫೆ. 13 ರಂದು ಬಳ್ಕುಂಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಬಳ್ಕುಂಜೆ ವಿಷ್ಣುಮೂರ್ತಿ ದೇವಸ್ಥಾನದ ರಸ್ತೆ, ಬಳ್ಕುಂಜೆ ಸಂತ ಪೌಲರ ರಸ್ತೆ ಕವತ್ತಾರು, ಎಸ್ಟಿ ಕಾಲನಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಜಂಯ ಮಟ್ಟು ಮಾತನಾಡಿದರು.
ಚರ್ಚ್ನ ಫಾ.ಮೆಕಲ್ ಡಿ’ಸೋಜಾ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಗ್ರಾಮ ಪಂಚಾಯ ತ್ ಅಧ್ಯಕ್ಷ ದಿನೇಶ್ ಪುತ್ರನ್, ಕಾಂಗ್ರೆಸ್ ಮುಖಂಡರಾದ ನೆಲ್ಸನ್ ಲೋಬೋ, ಬಿ.ಎಂ. ಆಸೀಫ್,ಮುತ್ತುಬಾವಾ, ನವೀನ್ ಕವತ್ತಾರು, ರಾಜೇಶ್ ಕವತ್ತಾರು, ರಾಮದಾಸ್, ರವೀಂದ್ರ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ ಕರ್ನಿರೆ,ಕಾಸಿಂ ಕರ್ನಿರೆ,ಗಣೇಶ್ಪೂಜಾರಿ, ಮಿಥುನ್, ವಸಂತ್ ಮತ್ತಿತರರಿದ್ದರು.