[1]ಹೈದರಾಬಾದ್: ಕರ್ನಾಟಕ ಗ್ರಾಮೀಣ ಕ್ರೀಡೆ ಕಂಬಳದ ಬಗ್ಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಕರ್ನಾಟಕದ ಗ್ರಾಮೀಣ ಕ್ರೀಡೆ ಕಂಬಳಕ್ಕೆ ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದರಿಂದ ಅಂಕಿತ ಬಿದ್ದ ವಿಷಯ ತಿಳಿದ ಸೆಹ್ವಾಗ್, ಕಂಬಳಕ್ಕೆ ಇದ್ದ ತಡೆ ನಿವಾರಣೆಯಾಗಿದ್ದು ಒಳ್ಳೆಯ ಸಂಗತಿ. ಗ್ರಾಮೀಣ ಕ್ರೀಡೆಗಳನ್ನು ಉಳಿಸಲೇಬೇಕಾಗಿದ. ರಾಷ್ಟ್ರಪತಿಗಳು ಕಂಬಳ ಬಿಲ್ ಪಾಸ್ ಮಾಡಿದ್ದು ನಿಜಕ್ಕೂ ಗ್ರೇಟ್. ಇನ್ಮುಂದೆ ಕಂಬಳ ಕರ್ನಾಟಕದಲ್ಲಿ ಕಾನೂನುಬದ್ಧ ಗ್ರಾಮೀಣ ಕ್ರೀಡೆಯಾಗಿದೆ. ಯುವಕರ ಚೈತನ್ಯವೃದ್ಧಿಸುವಂತಹ ಕ್ರೀಡೆಗಳನ್ನು ತಡೆಯಲು ಯತ್ನಿಸುತ್ತಿರುವ ಕೆಲ ಸಂಸ್ಥೆಗಳ ಯತ್ನವನ್ನು ಮೀರಿ ರಾಷ್ಟ್ರಪತಿಗಳ ಅಂಕಿತ ಬಿದ್ದಿರೋದು ದೊಡ್ಡ ವಿಷಯ ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರ್ನಾಟಕದ ಗ್ರಾಮೀಣ ಕ್ರೀಡೆ ಕಂಬಳದ ಬಿಲ್ ಪಾಸ್ ಮಾಡಿದ್ದರು. ಈ ವಿಷಯ ತಿಳಿದ ಸೆಹ್ವಾಗ್ ಇದರ ಬಗ್ಗೆ ಟ್ವೀಟ್ ಮಾಡಿದ್ದರು. ಇನ್ನು ಈ ಟ್ವೀಟ್ ನೋಡಿದ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.