- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಸಬಾ ಬೆಂಗ್ರೆ ಅಹಿತಕರ ಘಟನೆಗೆ ಕಾಂಗ್ರೆಸ್ ಕುಮ್ಮಕ್ಕು: ಸಂಸದ ನಳಿನ್ ಆರೋಪ

nalin-kumar [1]ಮಂಗಳೂರು: ಕಸಬಾ ಬೆಂಗ್ರೆಯಲ್ಲಿ ನಿನ್ನೆ ನಡೆದ ಅಹಿತಕರ ಘಟನೆಗೆ ಕಾಂಗ್ರೆಸ್ ಕುಮ್ಮಕ್ಕು ಕಾರಣ. ಕಾಂಗ್ರೆಸ್ ಈ ಕೃತ್ಯವನ್ನು ವ್ಯವಸ್ಥಿತವಾಗಿ ನಡೆಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಒಂದು ತಿಂಗಳಿನಿಂದ ಇಂತಹ ಕೃತ್ಯವೆಸಗಲು ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ಕಾಂಗ್ರೆಸ್ ನ ವ್ಯವಸ್ಥಿತ ಷಡ್ಯಂತ್ರವಿದೆ. ಇದೀಗ ಈ ಕೃತ್ಯವನ್ನು ಬಿಜೆಪಿಯವರು ಎಸಗಿದ್ದಾಗಿ ಆರೋಪಿಸಲಾಗುತ್ತಿದೆ. ಈ ಘಟನೆಯ ಹಿಂದೆ ಶಾಸಕರು, ಸಚಿವರ ಕೈವಾಡವಿದೆ ಎಂದು ನಳಿನ್ ಆರೋಪಿಸಿದರು,

ಜನಪ್ರತಿನಿಧಿಯಾದ ಶಾಸಕರು ಎರಡೂ ಸಮುದಾಯಗಳ ಜನರೊಂದಿಗೆ ಮಾತನಾಡಬೇಕಿತ್ತು. ಆದರೆ ಅವರು ಏಕಪಕ್ಷೀಯವಾಗಿ ವರ್ತಿಸಿದ್ದಾರೆ. ಅಲ್ಲಿರುವ ಅಕ್ರಮ ವಾಸಿಗಳು ಹಾಗು ಗಾಂಜಾ ದಂಧೆಯನ್ನು ಮಟ್ಟ ಹಾಕಬೇಕು. ಶಾಸಕ ಜೆ.ಆರ್. ಲೋಬೊ ಸಜ್ಜನ ಎಂದು ನಾನು ಭಾವಿಸಿದ್ದೆ. ಆದರೆ ಅವರು ಸಜ್ಜನರಲ್ಲ ಎಂಬುದು ನನಗೆ ತಿಳಿಯಿತು ಎಂದು ನಳಿನ್ ಇದೇ ಸಂದರ್ಭ ಹೇಳಿದರು.