- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಲ್ಯಾಸ್ ಕೊಲೆ ಕೇಸ್‌: ಪ್ರಮುಖ ಆರೋಪಿ ಸೇರಿ ಮೂವರ ಸೆರೆ

iliyas [1]ಮಂಗಳೂರು: ಟಾರ್ಗೆಟ್‌ ಗ್ರೂಪ್‌ನ ಇಲ್ಯಾಸ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಮತ್ತೆ ಮೂವರನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪ್ರಮುಖ ಆರೋಪಿ ಉಳ್ಳಾಲ ಧರ್ಮನಗರದ ದಾವೂದ್ (38), ಮಂಜೇಶ್ವರ ಉದ್ಯಾವರದ ಮುಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ನಾಚಿ (25), ಮಂಜೇಶ್ವರ ಸಿ.ಎಂ. ನಗರದ ರಿಯಾಜ್ ಎ. ಯಾನೆ ರಿಯಾ ಯಾನೆ ಇಯ್ಯಾ (32) ಎಂದು ಗುರುತಿಸಲಾಗಿದೆ. ಜ. 13ರಂದು ಬೆಳಿಗ್ಗೆ ಇಲ್ಯಾಸ್‌‌‌ನನ್ನು ದುಷ್ಕರ್ಮಿಗಳು ಆತನ ಮನೆಯಲ್ಲಿ ಮಲಗಿದ್ದ ಸಮಯ ಚೂರಿಯಿಂದ ತಿವಿದು ಕೊಲೆಗೈದಿದ್ದರು.

ದಾವೂದ್ ಕೊಲೆಯಲ್ಲಿ ನೇರ ಭಾಗಿಯಾಗಿದ್ದು, ಮುಹಮ್ಮದ್ ನಾಸಿರ್ ಕೊಲೆ ಆರೋಪಿಗಳಿಗೆ ಆಶ್ರಯ ನೀಡಿ ಹಣಕಾಸು ನೆರವು ಒದಗಿಸಿದ್ದ ಎನ್ನಲಾಗಿದೆ. ದಾವೂದ್‌ನ ಮೇಲೆ ಇಲ್ಯಾಸ್‌‌ ಕೊಲೆ ಪ್ರಕರಣ ಸೇರಿ ಒಟ್ಟು ನಾಲ್ಕು ಕೊಲೆ, ಎರಡು ಕೊಲೆ ಯತ್ನ ಹಾಗೂ ಇತರ ಐದು ಪ್ರಕರಣಗಳು ದಾಖಲಾಗಿವೆ. ಮಹಮ್ಮದ್ ನಾಸಿರ್ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಾದ ಮಹಮ್ಮದ್ ಸಮೀರ್ ಯಾನೆ ಸಮೀರ್ ಮತ್ತು ನಮೀರ್ ಹಂಝ ಎಂಬಿಬ್ಬರನ್ನು ಬಂಧಿಸಲಾಗಿತ್ತು.