[1]ಬೆಂಗಳೂರು: ಬ್ಯಾಂಕ್ಗೆ ವಂಚನೆಗೈದ ಆರೋಪದಲ್ಲಿ ಬಹುಭಾಷಾ ನಟಿ ಸಿಂಧು ಮೆನನ್ ಹಾಗೂ ಆತನ ಸಹೋದರನ ವಿರುದ್ಧ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಆಡಿ ಕಾರು ಖರೀದಿಸುವ ನೆಪದಲ್ಲಿ ಸುಳ್ಳು ದಾಖಲೆ ನೀಡಿ ಬ್ಯಾಂಕ್ ಆಫ್ ಬರೋಡಾದಿಂದ 36.78 ಲಕ್ಷ ರೂ. ಸಾಲ ಪಡೆದ ಆರೋಪ ದಲ್ಲಿ ಸಿಂಧು ಮೆನನ್ ಸಹೋದರನೆಂದು ಪರಿಚಯಿಸಿಕೊಂಡಿರುವ ಕಾರ್ತಿಕೇಯನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ನಂ.1 ಆರೋಪಿಯಾಗಿ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಕಾರ್ತಿಕೇಯನ್ ಬ್ಯಾಂಕ್ನಿಂದ ಸಾಲ ಪಡೆದ ಹಣವನ್ನು ಸಿಂಧು ಮೆನನ್ ಬ್ಯಾಂಕ್ ಖಾತೆಗೆ ಹಸ್ತಾಂತರಿಸಿದ್ದ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಿಂಧು ವಿರುದ್ದ ಕಾರ್ತಿಕೇಯನ್ಗೆ ಸಹಕರಿಸಿದ ಆರೋಪ ಹೊರಿಸಿ ಎಫ್ಐಆರ್ನಲ್ಲಿ ಹೆಸರು ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಪ್ರಧಾನ ಆರೋಪಿ ಕಾರ್ತಿಕೇಯನ್ ಬ್ಯಾಂಕ್ ಆಫ್ ಬರೋಡಾದಿಂದ ಸಾಲ ಪಡೆದ ಬಳಿಕ ಸಾಲ ಮರುಪಾವತಿ ಮಾಡದೇ ತಲೆ ಮರೆಸಿಕೊಂಡಿದ್ದ. ಹಲವು ಬಾರಿ ನೋಟಿಸ್ ನೀಡಿದ್ದ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು ಎನ್ನಲಾಗಿದೆ.