[1]ಮಂಗಳೂರು: ಈ ಬಾರಿಯ’ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಸೂಲಗಿತ್ತಿ ನರಸಮ್ಮಅವರನ್ನುಇಂದುದೆಹಲಿ ಕರ್ನಾಟಕ ಸಂಘದಲ್ಲಿಅಭಿನಂದಿಸಲಾಯಿತು. ಹಿಂದಿನ ನಮ್ಮ ಸಂದರ್ಭದಲ್ಲಿ ನಮ್ಮಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳಿರಲಿಲ್ಲ. ಇದೇಊರಿನಲ್ಲಿ ಸೂಲಗಿತ್ತಿಯವರು ಹೆರಿಗೆ ಮಾಡಿಸಿ ಎಲ್ಲರನ್ನೂಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಮಾತ್ರವಲ್ಲಅವರೆಲ್ಲ ಇಂದಿನ ಹಾಗೆ ಹಣದ ಆಶೆಗಾಗಿ ಆ ಕಾಯಕವನ್ನು ಮಾಡದೇ ಸಮಾಜ ಸೇವೆ ಮಾಡುತ್ತಿದ್ದರುಎಂದುಅವರನ್ನು ಅಭಿನಂದಿಸಿ, ಸನ್ಮಾನಿಸಿ ದೆಹಲಿ ಕರ್ನಾಟಕಸಂಘದಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದರು.
ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜಸ್ವಾಗತಿಸಿ ವಂದಿಸಿದರು.ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕರಾದ ಲಕ್ಷ್ಮೀನಾರಾಯಣಮತ್ತು ಸಂಘದಜಂಟೀ ಕಾರ್ಯದರ್ಶಿ ಶ್ರೀ ಟಿ.ಪಿ.ಬೆಳ್ಳಿಯಪ್ಪ ಅವರು ಉಪಸ್ಥಿತರಿದ್ದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನರಸಮ್ಮಅವರುದೆಹಲಿ ಕರ್ನಾಟಕ ಸಂಘ ಒಳ್ಳೆಯ ಕೆಲಸ ಮಾಡುತ್ತಿದೆಎಂದು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.