- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಡಿಕೆ, ಬಾಳೆತೋಟದಲ್ಲಿ ಕಾಡಾನೆಗಳ ನಿರಂತರ ದಾಂಧಲೆ.. ಕ್ಯಾರೆ ಎನ್ನದ ಅರಣ್ಯಾಧಿಕಾರಿಗಳು!

aracnut [1]ಮಂಗಳೂರು: ಕೃಷಿ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿದ ಪರಿಣಾಮ ಅಡಿಕೆ, ಬಾಳೆ ತೋಟ ಸಂಪೂರ್ಣ ನಾಶಗೊಂಡಿರುವ ಘಟನೆ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮ‌ದ ನಾರ್ಕೋಡಿನಲ್ಲಿ ನಡೆದಿದೆ.

ಕಳೆದ ಐದು ದಿನಗಳಿಂದ ಕಾಡಾನೆಗಳು ತೋಟಕ್ಕೆ ನುಗ್ಗುತ್ತಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆಗಳುನ್ನು ನಾಶ ಪಡಿಸುತ್ತಿವೆ. ಕೃಷಿಕರ ದೂರಿಗೆ ಅರಣ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.

ಇನ್ನು ದೂರು ನೀಡಿದರೂ ಸಹ ಸ್ಥಳಕ್ಕೆ ಸುಳ್ಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಅರಣ್ಯಾಧಿಕಾರಿಗಳ‌ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶಗೊಂಡು ಹರಿಹಾಯ್ದಿದ್ದಾರೆ.