- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮತ್ತೆ ದುಷ್ಕೃತ್ಯ…ಮೂವರು ಯುವಕರ ಮೇಲೆ ತಲ್ವಾರ್‌ನಿಂದ ಹಲ್ಲೆ

murdered [1]ಮಂಗಳೂರು: ಮೂವರ ಯುವಕರ ಮೇಲೆ ಅಪರಿಚಿತರ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ನಿನ್ನೆ ತಡರಾತ್ರಿ ಇಲ್ಲಿಯ ಬೆಂಗ್ರೆ ಫುಟ್ಬಾಲ್ ಮೈದಾನ ಬಳಿ ಈ ಘಟನೆ ನಡೆದಿದೆ.

ಕಸಬ ಬೆಂಗ್ರೆಯ ಅನ್ವೀಝ್, ಸಿರಾಜ್ ಹಾಗೂ ಇಝಾದ್ ಎಂಬುವರ ಮೇಲೆ ತಲವಾರ್‌ನಿಂದ ದಾಳಿ ನಡೆದಿದೆ. ಘಟನೆಯಲ್ಲಿ ಇವರು ಗಾಯಗೊಂಡಿದ್ದಾರೆ. ಕಸಬ ಬೆಂಗ್ರೆಯಿಂದ ತಣ್ಣೀರುಬಾವಿಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಘಟನೆ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.