ಸಮತಾದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಮತ್ತು ಶಿಕ್ಷಕ ದಿನಾಚರಣೆ.

2:07 PM, Tuesday, September 21st, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ವಿಂಶತಿ ವರ್ಷಾಚರಣೆಯಲ್ಲಿರುವ ಸಮತಾ ಮಹಿಳಾ ಬಳಗದ ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮವು ಶನಿವಾರ ಶ್ರೀ ಸುಬ್ರಹ್ಮಣ್ಯ ಸಭಾ ಸದನದಲ್ಲಿ ನೆರವೇರಿತು. ಕಲಾನಿಕೇತನದ ಸಂಗೀತ ಮತ್ತು ವೀಣಾ ಶಿಕ್ಷಕಿ ಶ್ರೀಮತಿ ಸಾವಿತ್ರಿ ರಾಮ್ ರಾವ್ ಮುಖ್ಯ ಅತಿಥಿಯಾಗಿದ್ದರು.


ಸಮತಾದ ಸದಸ್ಯೆಯರ 12 ವರ್ಷದೊಳಗಿನ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಧಾರ್ಮಿಕ  ಚೌಕ್ಕಟ್ಟಿನೊಳಗೆ ಛದ್ಮವೇಷ ಸ್ಪರ್ಧೆ ನಡೆಯಿತು. ಭಾಗವಹಿಸಿದ ಪುಟಾಣಿಗಳಿಗೆ ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು. ಆರ್ಥಿಕವಾಗಿ ತೊಂದರೆಗೀಡಾಗಿರುವ ರವೀಂದ್ರ ಎಂಬ ವಿದ್ಯಾರ್ಥಿಗೆ ಧನಸಹಾಯ ನೀಡಲಾಯಿತು. ಬಳಿಕ ಶಿಕ್ಷಕಿ ಸಾವಿತ್ರಿ ರಾಮ್ ರಾವ್ ಇವರನ್ನು ಸಮತಾದ ವತಿಯಿಂದ ಅಧ್ಯಕ್ಷೆ ಮತ್ತು ವಿನೋದಾ ಅನಂತರಾಮ್ ರಾವ್ ಹಾಗೂ ಶುಭಾ ಜಯರಾಮ್ ಭಟ್ ಹೂ, ಹಣ್ಣು, ಸ್ಮರಣಿಕೆ, ಸೀರೆಯನ್ನು ಕೊಟ್ಟು ಸಮ್ಮಾನಿಸಿದರು. ಕೊನೆಯಲ್ಲಿ ಸಾವಿತ್ರಿ ರಾಮ್ ರಾವ್ ಇವರಿಂದ ವೀಣವಾದನ ನಡೆಯಿತು. ಮನೋಹರ್ ರಾವ್ ತಬ್ಲಾ ದಲ್ಲಿ ಸಹಕರಿಸಿದರು.
ಪ್ರಾರಂಭದಲ್ಲಿ ಅಧ್ಯಕ್ಷೆ ಕಾತ್ಯಾಯಿನಿ ಸೀತರಾಮ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣಗೈದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಪೂರ್ಣಿಮಾ ಪೇಜಾವರ್ ನಿರೂಪಿಸಿದರು.
ಉಪಾಧ್ಯಕ್ಷೆ ಸುಕನ್ಯಾ ಭಟ್ ಧನ್ಯವಾದಗೈದರು.  ಸಂಗೀತ ಶಿಕ್ಷಕಿ ಮಿತ್ರ ವೃಂದ ಪ್ರಾರ್ಥಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English