- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪೊಳಲಿಯಲ್ಲಿ ಕೊನೆ ಚೆಂಡು ಸಮಾಪ್ತಿ- ಇಂದು ರಥೋತ್ಸವದ ಸಂಭ್ರಮ

polali [1]ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಕೊನೆಯ ಚೆಂಡು ಏ.11ರ ಬುಧವಾರ ಸಮಾಪ್ತಿಗೊಂಡಿತು. ಏ 7 ರ ಶನಿವಾರ ಆರಂಭಗೊಂಡ ಚೆಂಡು ಐದು ದಿನವು ಚೆಂಡಿನ ಉತ್ಸವ ಸರಳ ವಿಧಿ ವಿಧಾನಗಳ ಮೂಲಕ ನಡೆಯಿತು. ಇಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಮಹಾರಥೋತ್ಸವ ಹಾಗೂ ಏ ೧೩ ರಂದು ಅವಭೄತ ನಡೆಯಲಿದೆ.

polali-2 [2]ಇನ್ನು ಪೊಳಲಿ ದೇವಾಲಯದ ಜೀರ್ಣೋದ್ದಾರ ಪ್ರಕ್ರಿಯೆ ಪ್ರಗತಿಯಲ್ಲಿರುವುದರಿಂದ ಕೆಲವೊಂದು ಸೇವೆಗಳನ್ನು ಈ ಬಾರಿ ನಡೆಸಲಾಗಿಲ್ಲ ಅಲ್ಲದೆ ಈ ಬಾರಿ ಸಾಂಕೇತಿಕವಾಗಿ ಮೂರು ಸಲ ಚೆಂಡನ್ನು ಹಾರಿಸಿ ತೆಗೆಯಲಾಯಿತು. ಅನಾದಿ ಕಾಲದ ನಂಬಿಕೆಯಂತೆ ಪೊಳಲಿ ಚೆಂಡಿನ ದಿನ ಊರಿಗೆ ಮಳೆ ಬರುತ್ತದೆ ಎಂಬುದು ನಂಬಿಕೆ. ಅದರಂತೆ ತಾಲೂಕಿನಲ್ಲಿ ಭಾನುವಾರ ಪ್ರಥಮ ಚೆಂಡಿನ ದಿನ ಮಳೆ ಸುರಿದಿದೆ.

polali-3 [3]ಕ್ಷೇತ್ರದ ಉತ್ಸವದ ಮೂರ್ತಿಯನ್ನು ಕೇಪಳ ಹೂವಿನ ದಂಡೆಯಿಂದ ಅಲಂಕರಿಸಿ ಬಲಿ ನಡೆಸುತ್ತಾರೆ. ಉಡಿಕೆ ಸುತ್ತಿನ ವೇಳೆ ಹರಕೆಯ ಪುಷ್ಪಪೂಜೆ ನಡೆಯುತ್ತದೆ. ಪ್ರತಿ ಐದು ಹತ್ತು ಹದಿನೈದು , ಇಪ್ಪತ್ತು ಮತ್ತು ಇಪ್ಪತೈದನೇ ದಿವಸದಲ್ಲಿ ಹೂವಿನ ಹಳೆಯ ದಂಡಮಾಲೆ ಕಳಚಿ ಹೊಸ ದಂಡಮಾಲೆಯನ್ನು ಕಟ್ಟಿ ದಂಡಮಾಲೆ ಉತ್ಸವಗಳು ನಡೆಯುತ್ತದೆ

polali-4 [4]ಈ ಬಾರಿಯ ಚೆಂಡಾಟಯ ಸಂದರ್ಭ ದೇವಳದ ತಂತ್ರಿ ಸುಬ್ರಹ್ಮಣ್ಯ, ದೇವಳದ ಪ್ರಧಾನ ಅರ್ಚಕ ಮಾಧವ ಭಟ್‌, ನಾರಾಯಣ ಭಟ್‌, ವಿಷ್ಣುಮೂರ್ತಿ ನಟ್ಟೋಜ, ಅಮ್ಮುಂಜೆ ಗುತ್ತು ಡಾ| ಮಂಜಯ್ಯ ಶೆಟ್ಟಿ, ಉಳಿಪಾಡಿಗುತ್ತು ತಾರಾನಾಥ ಆಳ್ವ, ಮೊಗರುಗುತ್ತು ವಸಂತ ಶೆಟ್ಟಿ, ರಮೇಶ್‌ ರಾವ್‌, ಪರ್ದಕಂಡ ವಾಸುದೇವ ಭಟ್‌, ಕೃಷ್ಣ ಕುಮಾರ್‌ ಪೂಂಜ, ಕೃಷ್ಣರಾಜ್‌ ಮಾರ್ಲ, ಶಿವಪ್ರಸಾದ್‌ ಶೆಟ್ಟಿ, ಜೀವರಾಜ್‌ ಶೆಟ್ಟಿ, ಕೃಷ್ಣಪ್ಪ ಸಪಲಿಗ, ಮಟ್ಟಿ ಗಂಗಾಧರ ಜೋಗಿ ಮೊದಲಾದವರು ಉಪಸ್ಥಿತರಿದ್ದರು.